ಬೆಂಗಳೂರಿಗೆ ಒಂದೇ ದಿನ ಐವರು ನೂತನ ಪುಟ್ಟ ಕಮಿಷನರ್ಗಳು,, ಕನಸಲ್ಲವಿದು ನನಸು!
ಮೇಕ್ ಎ ವಿಶ್ ಪೌಂಡೇಷನ್ ಮತ್ತು ಬೆಂಗಳೂರು ನಗರ ಪೊಲೀಸ್ ಸಹಯೋಗದಿಂದ ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿರುವ ರುತನ್ ಕುಮಾರ್, ಮಹಮದ್ ಶಕೀಭ್, ಅರ್ಷಾಥ್ ಪಾಷಾ, ಶ್ರಾವಣಿ ಬಟ್ಟಾಳ, ಸೈಯ್ಯದ್ ಇಮಾದ್ ಸೇರಿ ಐವರು ಮಕ್ಕಳನ್ನ ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಕೊನೆಯ ಆಸೆ ಈಡೇರಿಸಲಾಯಿತು. ಐವರು ಮಕ್ಕಳಿಗೆ ಗಾಡ್ ಆಪ್ ಹಾನರ್ ಕೊಟ್ಟು ಕಮಿಷನರ್ಶೀಟ್ ಅಲಂಕರಿಸಲು ಅನುವು ಮಾಡಿಕೊಟ್ಟು ಮಕ್ಕಳ ಕೊನೆಯ ಆಸೆಯನ್ನ ಬೆಂಗಳೂರು ಪೊಲೀಸರು ಈಡೇರಿಸಿದ್ದಾರೆ. ಪುಟ್ಟ ಕಮಿಷನರ್ಗಳ ಜೊತೆ ನಮ್ಮ ಪ್ರತಿನಿಧಿ ಮಾಡಿರುವ ಚಿಟ್ ಚಾಟ್ ಇಲ್ಲಿದೆ ನೋಡಿ..