ಕರ್ನಾಟಕ

karnataka

ETV Bharat / videos

ಸಂಡೇ ಲಾಕ್​ಡೌನ್​ಗೆ ಸಕ್ಕರೆ ನಾಡಿನ ಜನರಿಂದ ಸಂಪೂರ್ಣ ಬೆಂಬಲ​

By

Published : Jul 5, 2020, 1:23 PM IST

ಮಂಡ್ಯ: ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯ ಜನರು ಸಾಥ್ ನೀಡಿದ್ದಾರೆ. ವಾಣಿಜ್ಯ ವ್ಯವಹಾರ ಸಂಪೂರ್ಣ ಬಂದ್ ಆಗಿದೆ. ಪೊಲೀಸ್ ಪಹರೆ ಎಂದಿನಂತೆ ನಡೆಯುತ್ತಿದೆ. ನಗರದ ಪೇಟೆ ಬೀದಿ, ವಿವಿ ರಸ್ತೆ, ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ವರ್ತಕರು ಅಂಗಡಿ ಬಂದ್ ಮಾಡಿ ಬೆಂಬಲ ನೀಡಿದ್ದಾರೆ. ಎಂದಿನಂತೆ ಔಷಧ ಅಂಗಡಿಗಳು ತೆರೆದಿವೆ. ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್​ ಆಗಿದೆ. ಇನ್ನು ಮದ್ದೂರು, ಮಳವಳ್ಳಿ, ಪಾಂಡವಪುರ, ನಾಗಮಂಗಲ, ಕೆ.ಆರ್. ಪೇಟೆ, ಶ್ರೀರಂಗಪಟ್ಟಣದಲ್ಲೂ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತವಾಗಿದೆ.

ABOUT THE AUTHOR

...view details