ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯ ಕೋರಿದ ಸಿಎಂ ಬಿ.ಎಸ್.ವೈ
ಶಿವಮೊಗ್ಗ: ವಿಜಯದಶಮಿ ಹಬ್ಬವು ನಾಡಿನ ಜನತೆಗೆ ಒಳ್ಳೆಯದನ್ನು ಮಾಡಲಿ, ಜನ ಸ್ವಾಭಿಮಾನ, ಗೌರವ ಹಾಗೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾರೈಸಿದ್ದಾರೆ. ಕೊರೊನಾದಿಂದ ಹೊರ ಬಂದು ಜನ ಶಾಂತಿ-ನೆಮ್ಮದಿಯಿಂದ ನೆಲಸುವಂತಾಗಲಿ ಎಂದು ಮೈಸೂರಿಗೆ ತೆರಳುವ ಮುನ್ನ ಶಿವಮೊಗ್ಗದಲ್ಲಿ ಮಾಧ್ಯಮಗಳ ಮೂಲಕ ನಾಡಿನ ಜನತೆಗೆ ಸಿಎಂ ಶುಭಾಶಯ ಕೋರಿದರು.