ಕರ್ನಾಟಕ

karnataka

ಬೆಂಗಳೂರು ನಿರ್ಮಾಣ ಹಂತದ ವಾಟರ್​​​ ಟ್ಯಾಂಕ್​​ ಕುಸಿತ: 3 ಮಂದಿ ಸಾವು

By

Published : Jun 17, 2019, 3:21 PM IST

Published : Jun 17, 2019, 3:21 PM IST

ಬೆಂಗಳೂರಿನ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್​ನಲ್ಲಿ ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅವಶೇಷದಡಿ ಸಿಲುಕಿದ್ದ 6 ಜನರ ರಕ್ಷಣೆ ಮಾಡಲಾಗಿದ್ದು, ಇನ್ನೂ ನಾಲ್ವರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬಿಡಬ್ಲೂಎಸ್​​​​​ಎಸ್​​ಬಿ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸೆಂಟ್ರಿಂಗ್​​ಗೆ ಅಳವಡಿಸಿದ್ದ ಕಂಬ ಸಡಿಲಗೊಂಡು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಉಳಿದ 6 ಜನರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 22 ಜನ ಕಾರ್ಮಿಕರು ವಾಟರ್ ಟ್ಯಾಂಕ್​​ನ ಮೆಲ್ಛಾವಣಿಯಲ್ಲಿ ಕಾರ್ಯದಲ್ಲಿ ತೊಡಗಿದ್ದರು.

For All Latest Updates

TAGGED:

ABOUT THE AUTHOR

...view details