ಕರ್ನಾಟಕ

karnataka

ETV Bharat / videos

ಎತ್ತಿನ ಬಂಡಿಯ ಚಕ್ರದಿಂದ ಸ್ವಲ್ಪದರಲ್ಲೇ ಪಾರಾದ ಯುವಕ : ವಿಡಿಯೋ ವೈರಲ್

By

Published : Feb 28, 2021, 5:17 PM IST

ಮೈಸೂರು : ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಬಂಡಿ ಹಬ್ಬ ನಡೆಯುತ್ತದೆ. ಹಬ್ಬದ ನಂತರ ನಗರದ ರತ್ನ ಮಹಲ್ ಬಳಿಯ ಮೈದಾನದಲ್ಲಿ ಎತ್ತಿನ ಗಾಡಿ ಓಟ ಆಯೋಜನೆ ಮಾಡಲಾಗುತ್ತದೆ. ಇತ್ತೀಚೆಗೆ ನಡೆದ ಬಂಡಿ ಹಬ್ಬದಲ್ಲಿ ಬಂಡಿ ಓಡುತ್ತಿರುವ ಸಂದರ್ಭ ಯುವಕನೊಬ್ಬ ಬಂಡಿಯ ಪಕ್ಕದಿಂದ ಓಡಿ ಹೋಗಿ ಎತ್ತಿನ ಹಗ್ಗ ಹಿಡಿಯಲು ಯತ್ನಿಸಿದ್ದ. ಗಾಡಿ ಬಂಡಿ ವೇಗವಾಗಿ ಹೋಗುತ್ತಿದ್ದ ಕಾರಣ ಎತ್ತಿನ ಹಗ್ಗ ಸಿಗದೆ ಆಯ ತಪ್ಪಿ ಯುವಕ ಬಂಡಿಯ ಚಕ್ರದ ಪಕ್ಕದಲ್ಲೇ ಬಿದ್ದಿದ್ದ. ಅದೃಷ್ಟವಶಾತ್ ಬಂಡಿಯ ಚಕ್ರ ಆತನ ಮೇಲೆ ಹತ್ತದ ಕಾರಣ, ಯುವಕ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.

For All Latest Updates

ABOUT THE AUTHOR

...view details