ಕರ್ನಾಟಕ

karnataka

ಪ್ರವಾಹಕ್ಕೆ ಕೊಚ್ಚಿ ಹೋದ ದೇವಸ್ಥಾನ: ವಿಡಿಯೋ ವೈರಲ್​

By

Published : Jul 30, 2022, 11:10 AM IST

Published : Jul 30, 2022, 11:10 AM IST

Updated : Feb 3, 2023, 8:25 PM IST

ಆಂಧ್ರಪ್ರದೇಶದ ವನದುರ್ಗ ದೇವಸ್ಥಾನವೊಂದು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಪೂರ್ವ ಗೋದಾವರಿಯ ಪುರುಷೋತ್ತಪಟ್ನಂನ ಸೀತಾನಗರಂ ಮಂಡಲದಲ್ಲಿ ನಡೆದಿದೆ. 15 ವರ್ಷದ ಹಿಂದೆ ಸ್ಥಳೀಯರೆಲ್ಲ ಸೇರಿ ಗೋದಾವರಿ ನದಿಯ ಎಡದಂಡೆಯಲ್ಲಿ ವನದುರ್ಗ ದೇವಸ್ಥಾನ ನಿರ್ಮಿಸಿದ್ದರು . ನಿನ್ನೆ ಶ್ರಾವಣ ಮಾಸದ ಮೊದಲನೇ ಶುಕ್ರವಾರವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಿಯ ದರ್ಶನಕ್ಕಾಗಿ ದೇಗುಲಕ್ಕೆ ಆಗಮಿಸಿದ್ದರು. ಮಧ್ಯಹ್ನಾದ ವೇಳೆಗೆ ಪ್ರವಾಹ ಹೆಚ್ಚಾಗಿ ದೇವಸ್ಥಾನ ವಾಲಿದೆ. ಗಾಬರಿಗೊಂಡ ಭಕರೆಲ್ಲರೂ ದೇವಸ್ಥಾನದಿಂದ ಹೊರಬಂದಿದ್ದು, ನೋಡ್​ ನೋಡುತ್ತಿದ್ದಂತೆ ದೇವಸ್ಥಾನ ಕುಸಿದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.
Last Updated : Feb 3, 2023, 8:25 PM IST

ABOUT THE AUTHOR

...view details