ಕರ್ನಾಟಕ

karnataka

ಅದ್ಧೂರಿಯಾಗಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ರಥೋತ್ಸವ

ದಾವಣಗೆರೆ: ಅದ್ಧೂರಿಯಾಗಿ ನೆರವೇರಿದ ಶಿವಯೋಗಿ ಸಿದ್ದರಾಮೇಶ್ವರ ರಥೋತ್ಸವ, ಸಚಿವ ತಂಗಡಗಿ ಭಾಗಿ

By ETV Bharat Karnataka Team

Published : Aug 21, 2023, 9:57 PM IST

Published : Aug 21, 2023, 9:57 PM IST

ದಾವಣಗೆರೆ :ಶಿವಯೋಗಿ ಸಿದ್ಧರಾಮೇಶ್ವರರ 61ನೇ ರಥೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು. ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ನೇತೃತ್ವದಲ್ಲಿ ಜರುಗಿದ ಉತ್ಸವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಭಾಗಿಯಾಗಿದ್ದರು.  

ನಗರದ ಭೋವಿ ಕಾಲೋನಿಯ ಅರಳಿ ಮರ ವೃತ್ತದಿಂದ ಆರಂಭವಾದ ರಥೋತ್ಸವ ಕೆ.ಆರ್.ರಸ್ತೆ, ಮಂಡಿಪೇಟೆ, ಮಾರುಕಟ್ಟೆ, ಸಾಕಷ್ಟು ಭಾಗಗಳಲ್ಲಿ ಸಾಗಿದ್ದು, ರಥೋತ್ಸವದಲ್ಲಿ ಹೆಚ್ಚು ಜನ ಪಾಲ್ಗೊಂಡಿದ್ದರು. ಸಿದ್ದರಾಮೇಶ್ವರ ದೇವರೊಂದಿಗೆ ಹೆಜ್ಜೆ ಹಾಕಿದ ಸಮುದಾಯದ ಜನ ಜೈಕಾರ ಮೊಳಗಿಸಿದರು.

ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ನಗರದ ವೆಂಕಭೋವಿ ಕಾಲೋನಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ದೇವರ 61ನೇ ರಥೋತ್ಸವ ಹಾಗೂ ಲಿ.ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರ 21ನೇ ಸಂಸ್ಮರಣೋತ್ಸವ ಸಮಾರಂಭದ ಉದ್ಘಾಟನೆಯನ್ನು ಸಚಿವ ಶಿವರಾಜ್ ತಂಗಡಗಿ ನೆರವೇರಿಸಿದರು. 

ಭೋವಿ ಸಮಾಜಕ್ಕೆ ಗುರು, ಗುರಿ ಇದೆ: ಭೋವಿ ಸಮಾಜಕ್ಕೆ ಗುರು ಹಾಗೂ ಗುರಿ ಎರಡೂ ಇದೆ. ಎಲ್ಲರ ಸಹಕಾರದಿಂದ ಸಮಾಜವನ್ನು ಮುನ್ನಡೆಸಬೇಕಿದೆ ಎಂದು ಸಚಿವ ತಂಗಡಗಿ ಹೇಳಿದರು. 

ಭೋವಿ ಗುರು ಪೀಠದ ವತಿಯಿಂದ ರಥೋತ್ಸವ ಜರುಗಿದೆ. ಶೋಷಿತ ಸಮುದಾಯಗಳು ಸಂಘಟನೆ ಆಗ್ಬೇಕು. ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜವನ್ನು ಸಂಘಟಿಸಲು ಸಿದ್ದರಾಮೇಶ್ವರ ದೇವರ ರಥೋತ್ಸವ ಮಾಡಲಾಗುತ್ತಿದೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.

ಇದನ್ನೂ ಓದಿ:Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್​ ಸ್ಟೆಪ್ ಹಾಕಿದ ಸಿದ್ದರಾಮಯ್ಯ

ABOUT THE AUTHOR

...view details