ಕರ್ನಾಟಕ

karnataka

ಹಿಮಪಾತದಿಂದ ಮುಚ್ಚಿದ ರಸ್ತೆ; ಚಿಕಿತ್ಸೆಗಾಗಿ ಏರ್​​ಲಿಫ್ಟ್​​ ಮೂಲಕ ಬಾಲಕಿ ರವಾನೆ

By

Published : Jan 14, 2021, 9:04 AM IST

Published : Jan 14, 2021, 9:04 AM IST

ಬಂಡಿಪೋರಾ: ಗಂಭೀರವಾಗಿ ಗಾಯಗೊಂಡಿದ್ದ 4 ವರ್ಷದ ಬಾಲಕಿಯನ್ನು ಗುರೆಜ್‌ನ ತುಲೈಲ್ ಪ್ರದೇಶದಿಂದ ಬಂಡಿಪೋರಾದ ಆಸ್ಪತ್ರೆಗೆ ಏರ್​​ಲಿಫ್ಟ್​​​ ಮೂಲಕ ಕರೆದೊಯ್ಯುವ ವ್ಯವಸ್ಥೆಯನ್ನು ಬಂಡಿಪೋರಾ ಜಿಲ್ಲಾಡಳಿತ ಮಾಡಿಕೊಟ್ಟಿದೆ. ತೋಯಿಬಾ ಮಂಜೂರ್ ಎನ್ನುವ ಬಾಲಕಿ ತನ್ನ ಮನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಕಳೆದ ಕೆಲವು ದಿನಗಳಲ್ಲಿ ಆ ಪ್ರದೇಶದಲ್ಲಿ ಭಾರಿ ಹಿಮಪಾತವಾದ ಹಿನ್ನೆಲೆ ಗುರೆಜ್-ತುಲೈಲ್ ರಸ್ತೆ ಮುಚ್ಚಲ್ಪಟ್ಟಿದ್ದರಿಂದ, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಬಾಲಕಿ ತೀವ್ರ ನೋವಿನಿಂದ ಬಳಲಿದ್ದು, ಕುಟುಂಬವು ಸಹಾಯಕ್ಕಾಗಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿತು. ನಂತರ ಅಧಿಕಾರಿಗಳು ಬಾಲಕಿಗೆ ಏರ್‌ಲಿಫ್ಟ್ ವ್ಯವಸ್ಥೆ ಮಾಡಿದರು. ಆಕೆಯನ್ನು ಬಂಡಿಪೋರಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕರೆದೊಯ್ಯಲಾಯಿತು. ಕುಟುಂಬಸ್ಥರು ಈ ಸಹಾಯಕ್ಕಾಗಿ ಬಂಡಿಪೋರಾ ಡಿಸಿ ಮತ್ತು ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.

ABOUT THE AUTHOR

...view details