ಹೈದರಾಬಾದ್: ಔಷಧ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿದೆ. ವಿಶೇಷವಾಗಿ ಜೀವಕೋಶ (ಸೆಲ್) ಮತ್ತು ಜನರೇಷನ್ ಥೆರಪಿಯಲ್ಲಿ ಕಳೆದೊಂದು ದಶಕದಿಂದ ಮಹತ್ವದ ಬದಲಾವಣೆಯಾಗಿದೆ ಎಂದು 'ಬಯೋಏಷ್ಯಾ 2023' ಕಾನ್ಫರೆನ್ಸ್ನಲ್ಲಿ ನೊವಾರ್ಟಿಸ್ ಸ್ವಿಟ್ಜರ್ಲೆಂಡ್ನ ಸಂಸ್ಥೆಯ ಸಿಇಒ ಡಾ ವಾಸ್ ನರಸಿಂಹನ್ ತಿಳಿಸಿದ್ದಾರೆ.
ಹೃದಯ ರೋಗಕ್ಕೆ ಚುಚ್ಚುಮದ್ದು: ಜಾಗತಿಕವಾಗಿ ಹೃದಯ ರೋಗ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದೆ. ನಂತರದಲ್ಲಿ ಕ್ಯಾನ್ಸರ್ ಮತ್ತು ನರರೋಗ ಸಮಸ್ಯೆಯಿಂದ ಸಾವುವರ ಸಂಖ್ಯೆ ಹೆಚ್ಚಿದೆ. ಹೃದಯ ರೋಗ ಚಿಕಿತ್ಸೆಯಲ್ಲಿ ಸಿ- ಆರ್ಎನ್ಎ ಜ್ಞಾನವನ್ನು ಪಡೆಯಲಯ ಪ್ರಯತ್ನಿಸಲಾಗುತ್ತಿದೆ. ಲಸಿಕೆ ರೀತಿಯ ಚಿಕಿತ್ಸಾ ಮಾದರಿಗಳ ಪತ್ತೆ ಸಾಧ್ಯತೆ ನಡೆಯುತ್ತಿದೆ. ಇದರಿಂದ ಪ್ರತಿನಿತ್ಯದ ಬದಲು ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಚಿಕಿತ್ಸೆ ಪಡೆಯಬಹುದಾಗಿದೆ. ಟಿ- ಸೆಲ್ ಥೆರಪಿ, ಇಮ್ಯೂನೊ ಆನ್ಕೊಲಾಜಿ ಮತ್ತು ಟಾರ್ಗೆಟ್ ಥೆರಪಿ ಇದೀಗ ಕ್ಯಾನ್ಸರ್ ಚಿಕಿತ್ಸೆಯಲ್ಲೂ ಲಭ್ಯವಾಗುತ್ತಿದೆ.
ನೊವಾರ್ಟಿಸ್, ಕ್ಯಾನ್ಸರ್ ಚಿಕಿತ್ಸೆಗಾಗಿ ರೆಡಿಯೋಲಿಗ್ನಡ್ ಎಂಬ ಹೊಸ ಚಿಕಿತ್ಸೆಯನ್ನು ಅವಿಷ್ಕರಿಸಿದೆ. ಟಾರ್ಗೆಟೆಡ್ ರೇಡಿಯೇಷನ್ ಮೂಲಕ ಕ್ಯಾನ್ಸರ್ ಟ್ಯೂಮರ್ಗಳ ಚಿಕಿತ್ಸೆಗೆ ಇದನ್ನು ಬಳಕೆ ಮಾಡಬಹುದು. ಆರ್ಎನ್ಎ ಆಧಾರಿತ ಜ್ಞಾನದೊಂದಿಗೆ ನರರೋಗದ ಸಮಸ್ಯೆ ಚಿಕಿತ್ಸೆಗೆ ಹೊಸ ಮಾದರಿ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ತಂತ್ರಜ್ಞಾನ ಬದಲಿ ಅಲ್ಲ: ಇದೇ ವೇಳೆ ಡಾಟಾ ಸೈನ್ಸ್ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಕುರಿತು ಮಾತನಾಡಿದ ಅವರು, ವೈದ್ಯಕೀಯ ಸಮಸ್ಯೆಗಳ ಕುರಿತು ಸರಿಯಾದ ಪರಿಹಾರದ ಮಾಹಿತಿಯನ್ನು ಕಂಪ್ಯೂಟರಿಗೆ (ಅಲ್ಗಾರಿದಂ) ನೀಡಲು ನಮ್ಮ ಬಳಿ ಸಾಕಷ್ಟು ಮಾಹಿತಿ ಇಲ್ಲ. ಮಾನವನ ಬುದ್ದಿಮತ್ತೆಗೆ ಬದಲಿಯಾಗಿ ತಂತ್ರಜ್ಞಾನ ಇಲ್ಲ. ಸಂಕೀರ್ಣ ವಿಚಾರಗಳ ಚಿಂತನೆ ಮತ್ತು ಸರಿಯಾದ ಪರಿಹಾರಗಳ ಕುರಿತು ಮಾನವನ ಬುದ್ದಿಶಕ್ತಿ ಮಾತ್ರ ಸರಿಯಾಗಿ ಕೆಲಸ ಮಾಡಲಿದೆ. ಮಾನವರಿಗೆ ತಂತ್ರಜ್ಞಾನ ಕೇವಲ ಸಹಾಯ ಮಾಡಬಲ್ಲದಷ್ಟೇ ಹೊರತು, ಅದೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂದರು.