ಶಿಲ್ಲಾಂಗ್: ಎಚ್ಐವಿ ನಿರ್ಮೂಲನೆಗೆ ಸರ್ಕಾರದ ಇನ್ನಿಲ್ಲದ ಪ್ರಯತ್ನ ನಡುವೆ ಮೇಘಾಲಯದಲ್ಲಿ ದಾಖಲಾಗಿರುವ ವರದಿ ಗಾಬರಿ ಮೂಡಿಸಿದೆ. ರಾಷ್ಟ್ರೀಯ ಅನುಪಾತಕ್ಕೆ ಹೋಲಿಕೆ ಮಾಡಿದಾಗ ಮೇಘಾಲಯದಲ್ಲಿ ಅಧಿಕ ಪ್ರಮಾಣದಲ್ಲಿ ಎಚ್ಐವಿ ಪ್ರಕರಣಗಳು ದಾಖಲಾಗಿದೆ. ಈ ಹಿನ್ನಲೆ ರಾಜ್ಯದ ಎಲ್ಲಾ 60 ಶಾಸಕರು ರೋಗದ ನಿರ್ಮೂಲನೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಹಿನ್ನಲೆ ನಡೆದ ಮೊದಲ ಸರ್ಕಾರಿ ಸಭೆಯಲ್ಲಿ ಪ್ರಮುಖವಾಗಿ ಆರು ಅಜೆಂಡಾಗಳನ್ನು ಚರ್ಚಿಸಲಾಯಿತು. ವಿಧಾನಸಭಾ ಸ್ಪೀಕರ್ ಥಾಮಸ್ ಎ ಸಂಗ್ಮಾ ಅಧ್ಯಕ್ಷತೆಯನ್ನು ಸಭೆ ನಡೆಸಲಾಗಿದೆ.
ಈ ಅಂಜೆಡಾದಲ್ಲಿ ಆರೋಗ್ಯಸೇವೆ ಲಭ್ಯತೆ, ಸಾಮಾಜಿಕ ಬೆಂಬಲದ ಕಾರ್ಯಕ್ರಮ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಶಿಕ್ಷಣ ಮತ್ತು ಜಾಗೃತಿ ಅಭಿಯಾನ, ಪೌಷ್ಟಿಕಾಂಶದ ಬೆಂಬಲ ಮತ್ತು ಕಾನೂನು ಸೇವೆ ಬೆಂಬಲವನ್ನು ಹೊಂದಿದೆ.
ಸಭೆಯ ಬಳಿಕ ಮಾತನಾಡಿರುವ ಸ್ಪೀಕರ್, ಎಚ್ಐವಿ/ ಏಡ್ಸ್ ರೋಗದ ವಿರುದ್ಧ ಹೋರಾಡಲು ಶಾಸಕರ ವೇದಿಕೆ ರೂಪಿಸಿದ್ದು, ಜನರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಗುವುದು. ಸಭೆಯಲ್ಲಿ ಕೇವಲ ಪಿಎಲ್ಎಚ್ಐವಿ ವಿಚಾರ ಜೊತೆಗೆ ಅವರ ಸಾಮಾಜಿಕ, ಆರ್ಥಿಕ ಮತ್ತಿತ್ತರ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಶಾಸಕರು ಎಚ್ಐವಿ ಬಾದಿತ ರೋಗಿಗಳಿಗೆ ಸಲಹೆ ನೀಡಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಯತ್ನವನ್ನು ನಡೆಸಲಿದ್ದಾರೆ.