ಯಾದಗಿರಿ/ಸುರಪುರ: 10 ದಿನದ ಹಸುಗೂಸು ಹೊಂದಿರುವ ಬಾಣಂತಿ ಮತ್ತು ಆಕೆಯ ಕುಟುಂಬಸ್ಥರು ಬೀದಿ ಬದಿಯೇ ವಾಸವಾಗಿದ್ದರು. ಈ ಕುರಿತು ಬುಧವಾರ ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಫಲ ಸಿಕ್ಕಿದೆ. ವರದಿ ನೋಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಈ ಕುಟುಂಬಕ್ಕೆ ಅಗತ್ಯ ನೆರವು ನೀಡಿದ್ದಾರೆ.
ನಗರದ ಕುಂಬಾರಪೇಟೆಯ ವಾಟರ್ ಫಿಲ್ಟರ್ ಟ್ಯಾಂಕ್ ಕೆಳಗೆ ಜೀವನ ನಡೆಸುತ್ತಿದ್ದ ಹೈದರಾಬಾದ್ ಮೂಲದ ಕುಟುಂಬದ ಕಷ್ಟದ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿದ ತಕ್ಷಣವೇ ಸ್ಪಂದಿಸಿದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಅಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ ನೆರವಿನ ಭರವಸೆ ನೀಡಿ, ಧೈರ್ಯ ತುಂಬಿದ್ದಾರೆ.