ಕರ್ನಾಟಕ

karnataka

By

Published : Oct 11, 2020, 3:47 PM IST

ETV Bharat / state

ಯಾದಗಿರಿ ಜಿಲ್ಲೆಯಲ್ಲಿ ಮಳೆ; ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ಶಹಪುರ ತಾಲೂಕಿನ ಕೋಳೂರ ಗ್ರಾಮದಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.

Yadgiri
Yadgiri

ಯಾದಗಿರಿ: ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊಳೂರ ಗ್ರಾಮದ ಐದು ಮನೆಗಳು ಜಲಾವೃತಗೊಳ್ಳುವ ಮೂಲಕ ಜನ ಪರದಾಟ ನಡೆಸಿದರು.

ಜಿಲ್ಲೆಯ ಶಹಪುರ ತಾಲೂಕಿನ ಕೋಳೂರ ಗ್ರಾಮದಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಅಲ್ಲಿದ್ದ ಐದು ಶೆಡ್ ಮನೆಗಳಿಗೆ ಮಳೆ ನೀರು ನುಗ್ಗಿತ್ತು.

ಅಷ್ಟೇ ಅಲ್ಲದೆ ಗ್ರಾಮದ ಹಲವು ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದವು.‌ ಇದರಿಂದ ಜನರು ಸಂಚರಿಸಲು ಸಂಕಷ್ಟ ಅನುಭವಿಸುವಂತಾಯಿತು.

ಇನ್ನು ಗ್ರಾಮದ ವಠಾರಗಳಲ್ಲಿ ನುಗ್ಗಿದ ಮಳೆ ನಿರನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಪಂಪ್ ಸೆಟ್ ಮೂಲಕ ಹೊರ ಹಾಕಿದರು

ABOUT THE AUTHOR

...view details