ಕರ್ನಾಟಕ

karnataka

ಐಎಂಎ ವಂಚನೆ ಪ್ರಕರಣ: ದೂರು ದಾಖಲಿಸಲು ಪ್ರತ್ಯೇಕ ಕೌಂಟರ್ ತೆಗೆದ ವಿಜಯಪುರ ಪೊಲೀಸರು

ಐಎಂಎ ಪ್ರಕರಣದಲ್ಲಿ ವಂಚನೆಗೊಳಗಾದವರಿಗೆ ದೂರು ಸಲ್ಲಿಸಲು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

By

Published : Jun 15, 2019, 11:19 AM IST

Published : Jun 15, 2019, 11:19 AM IST

ಐಎಂಎ

ವಿಜಯಪುರ :ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಐಎಂಎ ಜುವೆಲ್ಸರ್ ವಂಚನೆ ಪ್ರಕರಣ ವಿಜಯಪುರಕ್ಕೂ ಹಬ್ಬಿರುವ ಸಂಶಯದ ಹಿನ್ನೆಲೆಯಲ್ಲಿ ವಂಚನೆಗೊಳಗಾದವರು ದೂರು ಸಲ್ಲಿಸಲು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಪ್ರೆಸ್ ನೋಟ್​

ಈ ಕುರಿತು ಪ್ರಕಟಣೆ ನೀಡಿರುವ ಎಸ್ಪಿ ಪ್ರಕಾಶ್ ನಿಕಂ ಐಎಂಎ ವಂಚನೆಗೊಳಗಾಗಿದ್ದರೆ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲೆ ಸಮೇತ ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಇದಕ್ಕಾಗಿ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಅಲ್ಲಿ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ನಗದು, ಬಂಗಾರ ಸೇರಿದಂತೆ ಯಾವುದೇ ಆಸ್ತಿ ಪತ್ರ ಇಟ್ಟಿದ್ದರೆ ಅದರ ದಾಖಲೆ ಸಲ್ಲಿಸಿ ರಶೀದಿ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details