ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮಕ್ಕೆ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಭಾನುವಾರ ರೈತರು ಪ್ರತಿಭಟನೆ ನಡಸಿದ್ದಾರೆ. ಈ ವೇಳೆ ಸಹನೆ ಕಳೆದುಕೊಂಡ ಕೆಲ ರೈತರು ಸೆಕ್ಷನ್ ಅಧಿಕಾರಿ ಮಲ್ಲಿಕಾರ್ಜುನ ಗೇಡಿ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಲ್ಲದೇ ಹಲ್ಲೆಗೂ ಮುಂದಾಗಿದ್ದ ಘಟನೆ ತಾಲೂಕಿನ ಢವಳಗಿ ಗ್ರಾಮದಲ್ಲಿ ನಡೆದಿದೆ.
ಈ ವಿಷಯವನ್ನು ತಿಳಿದ ಢವಳಗಿಯ ಪ್ರಗತಿಪರ ರೈತ ಮುಖಂಡ ಸಿದ್ದನಗೌಡ ಬಿರಾದಾರ ಅವರು, ಮಡಿಕೇಶ್ವರ ರೈತ ಪ್ರಮುಖರೊಂದಿಗೆ ಮಾತನಾಡಿ, ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಅಧಿಕಾರಿಗಳ ಜೊತೆಗೆ ಕುಳಿತು ಏನೇ ಸಮಸ್ಯೆ ಇದ್ದರು ಬಗೆಹರಿಸಿಕೊಳ್ಳಿ ಎನ್ನುತ್ತಿದ್ದಂತೆ ಅದನ್ನು ಹೇಳಲು ನೀವ್ಯಾರು ಎಂದು ಅವರೊಂದಿಗೂ ರೈತರು ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೆರಳಿದ ಮುಖಂಡ ಸಿದ್ಧನಗೌಡ, ಸೆಕ್ಷನ್ ಅಧಿಕಾರಿ ಗೇಡಿ ಅವರನ್ನು ಆಕ್ರೋಶಗೊಂಡಿದ್ದ ರೈತರ ಮುಂದೆ ತಂದು ನಿಲ್ಲಿಸಿ ಹೊಡೆಯುವಂತೆ ಸವಾಲು ಹಾಕಿದ್ದಾರೆ. ಈ ವೇಳೆ ಢವಳಗಿಯ ರೈತರು, ಮಡಿಕೇಶ್ವರದ ರೈತರ ಮಧ್ಯೆ ತಳ್ಳಾಟ ನಡೆದಿದ್ದು, ಅಧಿಕಾರಿ ಗೇಡಿ ಅವರನ್ನು ಎಳೆದಾಡಿದ್ದಾರೆ.