ಕರ್ನಾಟಕ

karnataka

ETV Bharat / state

ಉತ್ತರ ತತ್ತರ: ಕೃಷ್ಣೆ ಶಾಂತವಾಗಲೆಂದು ಬೆಳ್ಳುಬ್ಬಿ ಪೂಜೆ

ಉತ್ತರ‌ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಕೃಷ್ಣಾ ನದಿ ಶಾಂತವಾಗಿ ಹರಿಯಲೆಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಕೃಷ್ಣೆಗೆ ಪೂಜೆ ಸಲ್ಲಿಸಿದರು.

By

Published : Aug 10, 2019, 4:58 AM IST

ಮಾಜಿ ಸಚಿವರ ನೇತೃತ್ವದಲ್ಲಿ ಕೃಷ್ಣಾ ನದಿಗೆ ಪೂಜೆ

ವಿಜಯಪುರ: ಉತ್ತರ‌ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿರುವ ಕೃಷ್ಣಾ ನದಿ ಶಾಂತವಾಗಿ ಹರಿಯಲೆಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಕೃಷ್ಣೆಗೆ ಪೂಜೆ ಸಲ್ಲಿಸಿದ್ದಾರೆ.

ಮಾಜಿ ಸಚಿವರ ನೇತೃತ್ವದಲ್ಲಿ ಕೃಷ್ಣಾ ನದಿಗೆ ಪೂಜೆ

ಪ್ರತಿ ವರ್ಷದಂತೆ ಕೃಷ್ಣಾ ನದಿ ತುಂಬಲೆಂದು ಕೃಷ್ಣಾ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಪೂಜೆ ಸಲ್ಲಿಸಿ, ಕೃಷ್ಣೆ ಮೈದುಂಬಿ ಹರಿದು ರೈತರ ಬದುಕು ಹಸನು ಮಾಡಲೆಂದು ಪೂಜೆ ಮಾಡಲಾಗುತ್ತಿತ್ತು. ಪೂಜೆಯ ಪ್ರಭಾವವೆಂಬಂತೆ ಕೃಷ್ಣೆ ಈಗ ಒಡಿಲು ತುಂಬಿ ಮೈದುಂಬಿಕೊಂಡು ಹರಿಯುತ್ತಿದ್ದಾಳೆ. ಇದರಿಂದ ನದಿ ತೀರದ ಜನಜೀವನ ಅಸ್ತವ್ಯಸ್ತವಾಗಿದ್ದು, ಅನೇಕರು ನಿರಾಶ್ರಿತರಾಗಿದ್ದಾರೆ. ಹಾಗಾಗಿ ನದಿ ಶಾಂತಿಯಿಂದ ಹರಿಯಲೆಂದು ಕೃಷ್ಣಾ ನದಿಗೆ ಪೂಜೆ ಸಲ್ಲಿಸಲಾಯಿತು.

ABOUT THE AUTHOR

...view details