ಕರ್ನಾಟಕ

karnataka

By

Published : Feb 13, 2021, 12:37 PM IST

ETV Bharat / state

ಸಾಲಬಾಧೆ ತಾಳದೆ ಯುವ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲಮೇಲ ತಾಲೂಕಿನ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿ ನಡೆದಿದೆ.

Farmer suicide
ರೈತ ಆತ್ಮಹತ್ಯೆ

ವಿಜಯಪುರ:ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಆಲಮೇಲ ತಾಲೂಕಿನ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿ ನಡೆದಿದೆ.

ಸಾಲಭಾದೆ ತಾಳದೆ ರೈತ ಆತ್ಮಹತ್ಯೆ

ಹೊಲದಲ್ಲಿ ರೈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಂಡಲಿಂಗ ಜೀರಟಗಿ (22) ಆತ್ಮಹತ್ಯೆಗೆ ಶರಣಾದ ರೈತ.

ರೈತ ಪುಂಡಲಿಂಗ ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾದ ಕಾರಣ, ಜಮೀನಿನ‌ ಲೀಸ್ ಹಣ ಕೊಡಲಾಗದೇ ಹಾಗೂ‌ ಖಾಸಗಿಯಾಗಿ ಮಾಡಿದ ಸಾಲ‌ ಮರು ಪಾವತಿ ಮಾಡಲಾಗದೆ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಅಲಮೇಲ‌‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details