ಕರ್ನಾಟಕ

karnataka

By

Published : Mar 13, 2021, 5:20 PM IST

ETV Bharat / state

ವಿಜಯಪುರ ಜಿಪಂ ಅಧ್ಯಕ್ಷೆಯಿಂದ ಸ್ಮಶಾನ ವಾಸ್ತವ್ಯ: ಮೌಢ್ಯದ ವಿರುದ್ಧ ವಿನೂತನ ಪ್ರಯೋಗ

ಮಾ. 14ರಂದು ಸಂಜೆ 6 ಗಂಟೆಗೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸ್ಮಶಾನದಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್​ ಜಾರಕೊಹೊಳಿ, ಪವಾಡ ಬಯಲು ಪ್ರವೀಣ ಹುಲಿಕಲ್ ನಟರಾಜ್ ಹಾಗೂ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Cemetery stay by Vijayapura zp president
ಸ್ಮಶಾನ ವಾಸ್ತವ್ಯ

ವಿಜಯಪುರ: ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಭಯ ಮುಕ್ತ ಮತ್ತು ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸ್ಮಶಾನದಲ್ಲಿ ವಾಸ್ತವ್ಯ ಹೂಡುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ತಿಳಿಸಿದರು.

ವಿಜಯಪುರ ಜಿಪಂ ಅಧ್ಯಕ್ಷೆಯಿಂದ ಸ್ಮಶಾನ ವಾಸ್ತವ್ಯ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 14ರಂದು ಸಂಜೆ 6 ಗಂಟೆಗೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸ್ಮಶಾನದಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್​ ಜಾರಕೊಹೊಳಿ, ಪವಾಡ ಬಯಲು ಪ್ರವೀಣ ಹುಲಿಕಲ್ ನಟರಾಜ್ ಹಾಗೂ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಮಾಜಿ ಸಚಿವರುಗಳು, ಹಾಲಿ ಶಾಸಕರು ಭಾಗಿಯಾಗಲಿದ್ದಾರೆ‌. ಈ ಕಾರ್ಯಕ್ರಮದ ಮೂಲ ಉದ್ದೇಶ ಭವಿಷ್ಯ ಹೇಳುವುದು, ವಾಮಾಚಾರ, ಮಾಟ ಮಂತ್ರ, ಡೋಂಗಿ ಪವಾಡಗಳು ಇಂದು ಜಗತ್ತನ್ನು ಆಳುತ್ತಿವೆ, ಮುಗ್ಧ ಮನಸುಗಳನ್ನು ಹಾಳು ಮಾಡುತ್ತಿವೆ. ಈ ಕಾರಣಕ್ಕಾಗಿ ಭಯ ಮುಕ್ತ ಹಾಗೂ ಮೂಢನಂಬಿಕೆಗಳಿಂದ ದೂರವಿದ್ದು, ವಿಜ್ಞಾನ ಹೇಳುವುದನ್ನು ಮಾತ್ರ ನಂಬಿ ನೆಮ್ಮದಿಯ ಜೀವನ ನಡೆಸಲಿ ಎಂಬ ಸದುದ್ದೇಶದಿಂದ ಸ್ಥಶಾನದಲ್ಲಿ ವಾಸ ಮಾಡಲಿದ್ದೇನೆ ಎಂದು ತಿಳಿಸಿದರು.

ಈ ವಾಸ್ತವ್ಯ ಕಾರ್ಯಕ್ರಮ ಶಾಸಕ ಸತೀಶ್ ಜಾರಕೊಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದೆ. ತಮ್ಮ ತಂದೆ ಕೂಡ ಮೌಢ್ಯತೆ ಧಿಕ್ಕರಿಸಿ ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಮೂಢನಂಬಿಕೆಯಿಂದ ದೂರವಿರುವಂತೆ ಸಂದೇಶ ಸಾರಿದ್ದಾರೆ. ಅವರ ಪ್ರೇರಣೆಯಿಂದ ನಾನು ಸಹ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈಗಾಗಲೇ ಹತ್ತು ಹಲವು ಕಡೆ ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟ ಪರಿಹರಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆಯ ವಿಜಯಪುರ ಸಂಚಾಲಕ ಪ್ರಭುಗೌಡ ಪಾಟೀಲ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.

ABOUT THE AUTHOR

...view details