ಕರ್ನಾಟಕ

karnataka

ETV Bharat / state

ಬೈಕ್ ಲಾರಿ ನಡುವೆ ಡಿಕ್ಕಿ: ಕೂಲಿ ಮಾಡಿ ಮರಳುತ್ತಿದ್ದವರ ದಾರುಣ ಸಾವು

ಮಂಗಳೂರು ಕಡೆಯಿಂದ ಅತಿವೇಗವಾಗಿ ಬಂದ ಲಾರಿಯು ಎದುರು ಬರುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಪಕ್ಕದಲ್ಲೇ ಇದ್ದ ಕಂದಕಕ್ಕೆ ಬಿದ್ದಿದ್ದಾರೆ.

By

Published : May 16, 2019, 10:41 PM IST

ಕೂಲಿಯಿಂದ ಮರಳುತ್ತಿದ್ದವರ ದಾರುಣ ಸಾವು

ಕಾರವಾರ: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕೂಲಿ ಮಾಡಿಕೊಂಡು ಮನೆಗೆ ಮರಳುತ್ತಿದ್ದ ಕೆಲಸಗಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕುಮಟಾದ ಹಂದಿಗೊಣ ಬಳಿ ನಡೆದಿದೆ.

ವಿನೋದ ಲಕ್ಷ್ಮಣ ಮುಕ್ರಿ ಹಾಗೂ ಸದಾನಂದ ನಾರಾಯಣ ಮುಕ್ರಿ ಸಾವಿಗೀಡಾದವರು. ಮಂಗಳೂರು ಕಡೆಯಿಂದ ಅತಿವೇಗವಾಗಿ ಬಂದ ಲಾರಿಯು ಎದುರಿನಿಂದ ಬರುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಪಕ್ಕದಲ್ಲೇ ಇದ್ದ ಕಂದಕಕ್ಕೆ ಬಿದ್ದಿದ್ದಾರೆ.

ಕೂಲಿಯಿಂದ ಮರಳುತ್ತಿದ್ದವರ ದಾರುಣ ಸಾವು

ಅಪಘಾತದ ತೀವ್ರತೆಗೆ ತಲೆ ಹಾಗೂ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details