ಶಿರಸಿ : ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಕಳಕಿಕಾರೆಯಲ್ಲಿ ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ನಡೆದಿದೆ.
ನವಲು ದೊಂಡು ಪಾಟೀಲ ಎಂಬುವವರಿಗೆ ಸೇರಿದ ಎತ್ತು ಚಿರತೆ ದಾಳಿಗೆ ಬಲಿಯಾಗಿದೆ. ಪ್ರತಿದಿನದಂತೆ ಮೈನಳ್ಳಿ ಹಾಗೂ ಕಳಕಿಕಾರೆ ಬಳಿಯ ಅರಣ್ಯ ಪ್ರದೇಶದಲ್ಲಿ ಮೇಯಲು ಹೋದಾಗ ಚಿರತೆ ದಾಳಿಯಿಂದ ಮೃತಪಟ್ಟಿದೆ ಎಂದು ಹೇಳಲಾಗಿದೆ.
ಎತ್ತಿನ ಮೃತದೇಹದ ಮೇಲೆ ಉಗುರಿನಿಂದ ಪರಚಿದ ಗಾಯಗಳಿದ್ದು, ಚಿರತೆ ದಾಳಿ ಮಾಡಿ ಎತ್ತಿನ ಅರ್ಧ ಭಾಗದಷ್ಟು ತಿಂದು ಉಳಿದ ಅರ್ಧ ಭಾಗದ ದೇಹವನ್ನು ಹಾಗೆಯೇ ಬಿಟ್ಟು ಹೋಗಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಮತ್ತು ಪಶುವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಎತ್ತಿನ ಮೃತದೇಹದ ಗಾಯಗಳನ್ನು ನೋಡಿದರೆ ಚಿರತೆ ದಾಳಿ ಮಾಡಿರುವ ಹಾಗೆ ಇದೆ. ಆದರು ಮರಣೋತ್ತರ ಪರಿಕ್ಷೇಯ ನಂತರ ಯಾವ ಕಾಡು ಪ್ರಾಣಿ ದಾಳಿ ಮಾಡಿದೆ ಎಂದು ಖಚಿತಪಡಿಸಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ.