ಕರ್ನಾಟಕ

karnataka

ETV Bharat / state

ಆನಂದ್​ ಅಸ್ನೋಟಿಕರ್​ಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ: ಶಾಸಕ ಸುನೀಲ ನಾಯ್ಕ

ಸದಾ ಗೋವಾದಲ್ಲಿ ಇರುವ ಆನಂದ್​ ಅಸ್ನೋಟಿಕರ್ ಆದಷ್ಟು ಬೇಗ ಯಾವುದಾದರೂ ಒಳ್ಳೆಯ ಮಾನಸಿಕ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಸೇರಬೇಕು ಎಂದು ಶಾಸಕ ಸುನೀಲ ನಾಯ್ಕ ಸಲಹೆ ನೀಡಿದ್ದಾರೆ

By

Published : Apr 7, 2021, 6:54 PM IST

mla Suneel Naik
ಶಾಸಕ ಸುನೀಲ ನಾಯ್ಕ

ಭಟ್ಕಳ:ಆನಂದ್​ ಅಸ್ನೋಟಿಕರ್​ಗೆ ಸೂಕ್ತ ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಸಂಸ್ಕೃತಿ ಬಿಂಬಿಸುತ್ತದೆ ಎಂದು ಶಾಸಕ ಸುನೀಲ ನಾಯ್ಕ ಕಿಡಿಕಾರಿದ್ದಾರೆ.

ಶಾಸಕ ಸುನೀಲ ನಾಯ್ಕ

ನಗರದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ವಿರುದ್ಧ ಮಾತನಾಡುವ ನೈತಿಕ ಹಕ್ಕು ಆನಂದ್ ಅಸ್ನೋಟಿಕರ್​ಗಿಲ್ಲ. ಆನಂದ್ ಆಸ್ನೋಟಿಕರ್​ ಚುನಾವಣೆಯಲ್ಲಿ ಅನಂತಕುಮಾರ್ ವಿರುದ್ಧ 4 ಲಕ್ಷ ಮತಗಳ ಅಂತರದಿಂದ ಸೋತರೂ ಅನಂತಕುಮಾರ್​ ಶಕ್ತಿ ಏನೆಂಬುದು ತಿಳಿಯುವಷ್ಟು ಬುದ್ಧಿ ಶಕ್ತಿ ಅವರಿಗಿಲ್ಲ.

ಕ್ಷೇತ್ರದ ಜನತೆಗೆ ಅನಂತಕುಮಾರ್​ ಏನು ಅಂತಾ ಗೊತ್ತಿದೆ. ಇಂತಹ ಹೇಳಿಕೆ ನೀಡುವುದು ಕೊನೆಯಾಗಬೇಕು. ಹೆಗಡೆಯವರು ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಅವರ ಆರೋಗ್ಯದ ಕುರಿತು ಇಲ್ಲಸಲ್ಲದ ಮಾತನಾಡುವುದನ್ನು ನಾವು ಮತ್ತು ಭಟ್ಕಳ ಬಿಜೆಪಿ ಮಂಡಲ ಸಹಿಸುವುದಿಲ್ಲ ಎಂದರು.

ABOUT THE AUTHOR

...view details