ಕರ್ನಾಟಕ

karnataka

ಅತೀ ವೇಗ ತಿಥಿ ಬೇಗ: ಶಿರಸಿಯಲ್ಲಿ ನಡೆಯಿತು ಸಿನಿಮೀಯ ರೀತಿಯ ಅಪಘಾತ!

ಅತೀ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶಿರಸಿ ತಾಲೂಕಿನ ಚಿಪಗಿ ಬಳಿ ನಡೆದಿದೆ.

By

Published : Dec 14, 2019, 2:19 PM IST

Published : Dec 14, 2019, 2:19 PM IST

Updated : Dec 14, 2019, 2:38 PM IST

sirasi
ಸಿನಿಮೀಯ ರೀತಿಯ ಅಪಘಾತ

ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಿನಿಮೀಯ ರೀತಿಯಲ್ಲಿ ಅಪಘಾತವೊಂದು ನಡೆದಿದೆ. ಅತೀ ವೇಗವಾಗಿ ಬರುತ್ತಿದ್ದ ಕಾರೊಂದು ಸುಮಾರು 200 ಅಡಿಗಳಷ್ಟು ಎತ್ತರಕ್ಕೆ ಹಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಸಿನಿಮೀಯ ರೀತಿಯ ಅಪಘಾತ

ಘಟನೆಯಲ್ಲಿ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಟಿ.ಎಸ್.ಎಸ್. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಹುಬ್ಬಳ್ಳಿ ರಸ್ತೆಯಿಂದ ಶಿರಸಿ ಕಡೆಗೆ ಆಗಮಿಸುತ್ತಿದ್ದ ಕಾರು ವೇಗ ನಿಯಂತ್ರಿಸಲಾಗದೆ ಅಪಘಾತಕ್ಕೀಡಾಗಿದೆ.

ತಾಲೂಕಿನ ಸಣ್ಣಕೇರಿ ಗ್ರಾಮಕ್ಕೆ ಸೇರಿದವರ ಕಾರು ಎನ್ನಲಾಗಿದ್ದು, ಅಪಘಾತದಲ್ಲಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದೆ. ಮೊದಲು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹೋದ ಕಾರು ಗಟಾರದ ಪಕ್ಕದ ಕಾಂಪೌಂಡ್​ಗೆ ಗುದ್ದಿದೆ. ಕಾಂಪೌಂಡ್​ಗೆ ಗುದ್ದಿದ ಕಾರು ಸುಮಾರು 200 ಅಡಿಗಳಷ್ಟು ಎತ್ತರಕ್ಕೆ ಹಾರಿ ಸ್ವಲ್ಪ ದೂರದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದೆ ಎಂದು ಸ್ಥಳೀಯರು ವಿವರಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Last Updated : Dec 14, 2019, 2:38 PM IST

ABOUT THE AUTHOR

...view details