ಕರ್ನಾಟಕ

karnataka

ETV Bharat / state

ಕಾಲುಸಂಕ ದಾಟುವಾಗ ಬಾಲಕಿ ಬಿದ್ದು ಕೊಚ್ಚಿ ಹೋದ ಪ್ರಕರಣ: ಕಾಲ್ತೋಡು ಗ್ರಾಮಕ್ಕೆ ಡಿಸಿ ಭೇಟಿ

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ಶಾಲೆಯಿಂದ ಬರುತ್ತಿದ್ದ ಕಾಲುಸಂಕ ದಾಟುವಾಗ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗಿದ್ದಳು. ಈ ಗ್ರಾಮಕ್ಕೆ ಡಿಸಿ ಕೂರ್ಮರಾವ್ ಭೇಟಿ ಕೊಟ್ಟರು.

By

Published : Aug 9, 2022, 10:57 PM IST

Updated : Aug 9, 2022, 11:04 PM IST

udupi-dc-kurma-rao-visits-kalthodu-village
ಕಾಲುಸಂಕ ದಾಟುವಾಗ ಬಾಲಕಿ ಬಿದ್ದು ಕೊಚ್ಚಿ ಹೋದ ಪ್ರಕರಣ: ಕಾಲ್ತೋಡು ಗ್ರಾಮಕ್ಕೆ ಡಿಸಿ ಭೇಟಿ

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ನೀರಿನಲ್ಲಿ ಶಾಲಾ ವಿದ್ಯಾರ್ಥಿನಿ ಕೊಚ್ಚಿ ಹೋಗಿದ್ದ ಪ್ರಕರಣದ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿದರು. ಈ ವೇಳೆ ಗ್ರಾಮದ ಸಮಸ್ಯೆಗಳ ಪರಿಹರಿಸುವ ಬಗ್ಗೆಅವರು ಭರವಸೆ ನೀಡಿದರು.

ಚಪ್ಪರಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ನೀರುಪಾಲಾಗಿದ್ದರು. ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು, ಇದುವರೆಗೆ ಪತ್ತೆಯಾಗಿಲ್ಲ.

ಕಾಲುಸಂಕ ದಾಟುವಾಗ ಬಾಲಕಿ ಬಿದ್ದು ಕೊಚ್ಚಿ ಹೋದ ಪ್ರಕರಣ: ಕಾಲ್ತೋಡು ಗ್ರಾಮಕ್ಕೆ ಡಿಸಿ ಭೇಟಿ

ಹೀಗಾಗಿ ಘಟನಾ ಸ್ಥಳಕ್ಕೆ ಡಿಸಿ ಕೂರ್ಮಾರಾವ್ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಮಕ್ಕಳಿಗೆ ಹೊಳೆ, ತೊರೆ ದಾಟಿ ಹೋಗಲು ಬಹಳ ಕಷ್ಟವಾಗುತ್ತಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಇದನ್ನೂ ಓದಿ:ಕುಂದಾಪುರ: ಕಾಲುಸಂಕ ದಾಟುವಾಗ ಹಳ್ಳಕ್ಕೆ ಬಿದ್ದು ನೀರುಪಾಲಾದ ಬಾಲಕಿ

Last Updated : Aug 9, 2022, 11:04 PM IST

ABOUT THE AUTHOR

...view details