ಕರ್ನಾಟಕ

karnataka

By

Published : Mar 16, 2021, 8:02 PM IST

ETV Bharat / state

ಗ್ರಾಪಂ ಮುಖ್ಯ ದ್ವಾರ ಬದಲಾವಣೆ ವಿಚಾರದಲ್ಲಿ ಸದಸ್ಯರ ನಡುವೆ ಗಲಾಟೆ

ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡದೇ ಮುಖ್ಯ ದ್ವಾರ ಬದಲಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವಿಚಾರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲು ಬಂದ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

Talk war between Congress-BJP members over panchayat door issue
ಕಾಂಗ್ರೆಸ್​-ಬಿಜೆಪಿ ಸದಸ್ಯರ ಗಲಾಟೆ

ಉಡುಪಿ: ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಮುಖ್ಯ ದ್ವಾರ‌ವನ್ನೇ ಬದಲಾವಣೆ ಮಾಡುವ ನಿರ್ಧಾರದ ಕುರಿತು ವಾಗ್ವಾದ ನಡೆದಿದೆ. ಉಡುಪಿಯ ತೆಂಕನಿಡಿಯೂರು ಗ್ರಾಮ ಪಂಚಾಯಿತಿಯ ಮುಖ್ಯ ದ್ವಾರ ನಿರ್ಮಾಣ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ​ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡದೇ ಮುಖ್ಯ ದ್ವಾರ ಬದಲಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ವಿಚಾರವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಂದಿದ್ದರು.

ಗ್ರಾಪಂ ಮುಖ್ಯದ್ವಾರ ಬದಲಾವಣೆ ವಿಚಾರದಲ್ಲಿ ಗಲಾಟೆ

ಇದೇ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ‌ ನಡುವೆ ವಾಗ್ವಾದ ನಡೆದಿದೆ. ದೂರು ನೀಡಲು ಬಂದ ಗ್ರಾಮಸ್ಥರಿಗೆ ಪಂಚಾಯತ್ ಅಧ್ಯಕ್ಷೆ ಹೊರಗೆ ಹೋಗಲು ಹೇಳಿದ್ದಾರೆ. ಇದರಿಂದ ಕೆರಳಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಪಂಚಾಯತ್​ಗೆ ದಿಢೀರ್ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ​​ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ:ಕಟೀಲ್​​ಗೆ ಪ್ರಾರ್ಥಿಸಿದ ಪೆನ್ನು ಕೊಟ್ಟ ವಿನಯ್ ಗುರೂಜಿ.. ಭದ್ರವಾಗಲಿದೆಯಾ ರಾಜ್ಯಾಧ್ಯಕ್ಷರ ಪಟ್ಟ!

ABOUT THE AUTHOR

...view details