ಉಡುಪಿ: ಜಿಲ್ಲೆಯ ಬೈಂದೂರಿನ ಬೋರ್ವೆಲ್ ಕೊರೆಯೋ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಬೋರ್ವೆಲ್ ಕೊರೆಯುವ ವೇಳೆ ಭೂ ಕುಸಿತ... ಮಣ್ಣಿನಡಿ ಸಿಲುಕಿದ ಯುವಕನ ರಕ್ಷಣಾ ಕಾರ್ಯ
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬೋರ್ವೆಲ್ ಕೊರೆಯುವ ವೇಳೆ ಕುಸಿತ ಉಂಟಾಗಿ ವ್ಯಕ್ತಿಯೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ.
ಬೋರ್ವೆಲ್ ಕೊರೆಯುವ ವೇಳೆ ಕುಸಿತ
ಮರವಂತೆ ಸಮೀಪ ಈ ಘಟನೆ ನಡೆದಿದ್ದು, 15 ಅಡಿ ಭೂಮಿಯೊಳಗೆ ಕುಸಿದಿರುವ ರೋಹಿತ್ ಖಾರ್ವಿ ಬೋರ್ವೆಲ್ ತೋಡುವ ವೇಳೆ ಸ್ಥಳದಲ್ಲಿ ನಿಂತಿದ್ದ. ಈ ವೇಳೆ ಬೋರ್ ವೆಲ್ ಪೈಪ್ ಸುತ್ತ ಭೂಮಿ ಕುಸಿದ ಪರಿಣಾಮ ರೋಹಿತ್ ಇದರಡಿ ಸಿಲುಕಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ವೈದ್ಯರು ಆಗಮಿಸಿದ್ದು ರೋಹಿತ್ ಖಾರ್ವಿಯನ್ನು ಮೇಲೆತ್ತಲು ಯತ್ನಿಸುತ್ತಿದ್ದಾರೆ.