ಉಡುಪಿ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಬೆಳಪುವಿನಲ್ಲಿ 25 ಕೆಎಲ್ ಆಕ್ಸಿಜನ್ ಪ್ಲಾಂಟ್ ಘಟಕ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್ ಸ್ಪಷ್ಟನೆ
ಉಡುಪಿ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಉಂಟಾಗಿಲ್ಲ. ಆಕ್ಸಿಜನ್ ಕೊರತೆಯಾಗದಂತೆ ಬೆಳಪುವಿನಲ್ಲಿ 25 ಕೆಎಲ್ ಆಕ್ಸಿಜನ್ ಪ್ಲಾಂಟ್ ಘಟಕ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ; ಡಿಸಿ ಜಗದೀಶ್ ಸ್ಪಷ್ಟನೆ
ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 6 kl ಆಕ್ಸಿಜನ್ ಪ್ಲ್ಯಾಂಟ್ ಹಾಗೂ ಮಣಿಪಾಲದಲ್ಲಿ 25 kl ಪ್ಲ್ಯಾಂಟ್ ಈಗಾಗಲೇ ಇದೆ. ಅಲ್ಲದೇ ಜಂಬೋ ಸಿಲಿಂಡರ್ಗಳನ್ನು ಮಂಗಳೂರಿನಿಂದ ತುಂಬಿಸಿ ತರಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಆಕ್ಸಿಜನ್ ಕೊರತೆ ಸಂಭವಿಸಲ್ಲ ಅಂತಾ ಡಿಸಿ ಹೇಳಿದ್ದಾರೆ.