ಕರ್ನಾಟಕ

karnataka

By

Published : Jun 21, 2020, 10:24 AM IST

ETV Bharat / state

ಸೂರ್ಯಗ್ರಹಣ: ಸಿಎಂ ಕುಟುಂಬಸ್ಥರಿಂದ ಸಿದ್ಧಲಿಂಗೇಶ್ವರ ದೇಗುಲದಲ್ಲಿ ಪೂಜೆ

ಸೂರ್ಯಗ್ರಹಣ ಹಿನ್ನೆಲೆ ಯಡಿಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇಗುಲದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಟುಂಬಸ್ಥರು ವಿಶೇಷ ಪೂಜೆ, ಹೋಮ, ಹವನವನ್ನು ನೆರವೇರಿಸಿದರು.

Pooje
Pooje

ತುಮಕೂರು:ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಯಡಿಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇಗುಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬಸ್ಥರು ವಿಶೇಷ ಪೂಜೆ, ಹೋಮ ಹವನವನ್ನು ನೆರವೇರಿಸಿದರು.

ಇಂದು ಬೆಳಿಗ್ಗೆ ಸಿಎಂ ಪುತ್ರ ವಿಜಯೇಂದ್ರ ಹಾಗೂ ಪುತ್ರಿ ಅರುಣಾದೇವಿ ಸೇರಿದಂತೆ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗ್ರಹಣ ದೋಷ ನಿವಾರಣೆಗಾಗಿ ವಿಶೇಷ ಹೋಮ ಹವನ ನೆರವೇರಿಸಲಾಯಿತು.

ಶನಿವಾರ ಸಂಜೆಯಿಂದ ವಿವಿಧ ಪೂಜೆಯಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದು, ಇಂದೂ ಕೂಡ ಪೂಜಾ ಕಾರ್ಯಕ್ರಮಗಳು ಮುಂದುವರೆಯಲಿದೆ ಎಂದು ದೇಗುಲದ ಮೂಲಗಳು ಸ್ಪಷ್ಟಪಡಿಸಿವೆ.

ABOUT THE AUTHOR

...view details