ತುಮಕೂರು :ಜಿಲ್ಲೆಯ ಗಡಿಭಾಗವಾದ ಪಾವಗಡ ಭಾಗದಲ್ಲಿ ಖತರ್ನಾಕ್ ಕದರಿ ಗ್ಯಾಂಗ್ ಸಂಚರಿಸುತ್ತಿದ್ದು, ಸಾರ್ವಜನಿಕರಲ್ಲಿ ತಾವು ಪೊಲೀಸ್ ಎಂದು ನಂಬಿಸಿ ಚಿನ್ನಾಭರಣವನ್ನು ದೋಚುತ್ತಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ಪೊಲೀಸರೆಂದು ನಂಬಿಸಿ ಆಭರಣ ಕಳ್ಳತನ... ಮಹಿಳೆಯರೇ ಹುಷಾರ್, ನೀವೇ ಇವ್ರ ಮೊದಲ ಟಾರ್ಗೆಟ್
ಜಿಲ್ಲೆಯ ಗಡಿಭಾಗದಲ್ಲಿ ಖತರ್ನಾಕ್ ಕದರಿ ಗ್ಯಾಂಗ್ ಕೈ ಚಳಕ ಹೆಚ್ಚಿದ್ದು ಇದರ ವಿರುದ್ದ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಕದರಿ ಗ್ಯಾಂಗ್
ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಯಸ್ಸಾದ ಮಹಿಳೆಯರೇ ಈ ಗ್ಯಾಂಗ್ನ ಟಾರ್ಗೆಟ್ ಆಗಿದ್ದಾರೆ. ಕದರಿ ಗ್ಯಾಂಗ್ ನ ಮಟ್ಟ ಹಾಕಲು ಎಲ್ಲಾ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪಾವಗಡ ಸೇರಿದಂತೆ ಹಲವು ಕಡೆ ಈ ಗ್ಯಾಂಗ್ ತಮ್ಮ ಕೈಚಳಕ ತೋರಿಸುತ್ತಿದ್ದು, ಇವರ ಬಲೆಗಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಪೊಲೀಸ್ ಹಾಗೂ ತುಮಕೂರು ಪೊಲೀಸರು ಜಂಟಿ ಕಾರ್ಯ ಚರಣೆಯಲ್ಲಿ ತೊಡಗಿದ್ದಾರೆ.