ಕರ್ನಾಟಕ

karnataka

ETV Bharat / state

ಎರಡು ಕಾರು-ಬೈಕ್ ನಡುವೆ ಅಪಘಾತ.. ಸಿದ್ಧಗಂಗಾ ಮಠದಿಂದ ಮರಳುತ್ತಿದ್ದ ದಂಪತಿ ದುರ್ಮರಣ

ರಸ್ತೆ ಅಪಘಾತದಲ್ಲಿ ಎರಡು ಕಾರುಗಳ ನಡುವೆ ಬೈಕ್ ಸಿಲುಕಿ ದಂಪತಿ ಮೃತಪಟ್ಟ ದುರ್ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.

By

Published : Mar 12, 2022, 9:43 PM IST

couple-died-in-road-accident-in-tumakuru
ಎರಡು ಕಾರು-ಬೈಕ್ ನಡುವೆ ಅಪಘಾತ

ತುಮಕೂರು:ರಸ್ತೆ ಅಪಘಾತದಲ್ಲಿಎರಡು ಕಾರುಗಳ ನಡುವೆ ಬೈಕ್ ಸಿಲುಕಿ ದಂಪತಿ ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಮೃತರನ್ನು ತುಮಕೂರಿನ ಕುವೆಂಪುನಗರ ನಿವಾಸಿಗಳಾದ ನರಸಿಂಹರಾಜು ಮತ್ತು ನಾಗರತ್ನಮ್ಮ ಎಂದು ಗುರುತಿಸಲಾಗಿದೆ.

ತುಮಕೂರು ಹೊರವಲಯದ ಊರ್ಡಿಗೆರೆ ರಸ್ತೆಯಲ್ಲಿನ ಸಿದ್ಧಗಂಗಾ ಮಠದ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಸಿದ್ಧಗಂಗಾ ಮಠದಿಂದ ಬರುತ್ತಿದ್ದ ದಂಪತಿಯು ಎರಡೂ ಕಾರುಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಪಲ್ಟಿಯಾದ ಕಾರು

ಕಾರಿ​ನಲ್ಲಿ ಪ್ರಯಾಣಿಸುತ್ತಿದ್ದ ಬಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಎಂಬುವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಜುರನ್ನು ಬೆಂಗಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅಪಘಾತದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ

For All Latest Updates

ABOUT THE AUTHOR

...view details