ಗಂಗಾವತಿ: ಕಾರಟಗಿ ನೂತನ ತಾಲೂಕಿನ ಮೊದಲ ಮಹಿಳಾ ತಹಶೀಲ್ದಾರ್ ಕವಿತಾ ಆರ್ ಅವರು ದಿಢೀರ್ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಾರಟಗಿ ತಹಶೀಲ್ದಾರ್ ಕವಿತಾ ವರ್ಗಾವಣೆ: ಹೊಸ ತಹಶೀಲ್ದಾರ್ ಆಗಿ ಶಿವಶಂಕರಪ್ಪ ನೇಮಕ
ಕಾರಟಗಿ ತಹಶೀಲ್ದಾರ್ ಕವಿತಾ ಅವರನ್ನು ವರ್ಗಾವಣೆ ಮಾಡಿ, ತೆರವಾದ ಸ್ಥಾನಕ್ಕೆ ಶಿವಶಂಕರಪ್ಪ ಕಟ್ಟೋಳಿ ಅವರನ್ನು ನಿಯೋಜಿಸಿ ಕಂದಾಯ ಇಲಾಖೆಯ ಕಾರ್ಯದರ್ಶಿ ಎಸ್. ನಾಗರಾಜ್ ಆದೇಶ ಹೊರಡಿದ್ದಾರೆ.
ಕಾರಟಗಿ ತಹಶೀಲ್ದಾರ್ ಕವಿತಾ ವರ್ಗಾವಣೆ
ಕವಿತಾ ಅವರಿಗೆ ಇನ್ನೂ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದ್ದು, ಇದೀಗ ಕವಿತಾ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಶಿವಶಂಕರಪ್ಪ ಅವರನ್ನು ನಿಯೋಜಿಸಿ ಕಂದಾಯ ಇಲಾಖೆಯ ಕಾರ್ಯದರ್ಶಿ ಎಸ್. ನಾಗರಾಜ್ ಆದೇಶ ಹೊರಡಿದ್ದಾರೆ.
ಈ ಮೊದಲು ಮಂಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಶಿವಶಂಕರಪ್ಪ ಕಟ್ಟೋಳಿ ಚುನಾವಣಾ ವಿಭಾಗದ ಗ್ರೇಡ್-1 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತಿದ್ದರು.