ಕರ್ನಾಟಕ

karnataka

ಕೊರೊನಾದಿಂದ ಮೃತಪಟ್ಟ ಹಿಂದೂ ಮಹಿಳೆಯ ಶವ ಸಂಸ್ಕಾರ ಮಾಡಿದ ಮುಸ್ಲಿಂ ಯುವಕರು

ಕೊರೊನಾದಿಂದ ಸಾವನ್ನಪ್ಪಿದ್ದ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಶಿವಮೊಗ್ಗದ ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ಮಾಡಿ ಮುಗಿಸಿದ್ದಾರೆ.

By

Published : May 10, 2021, 10:49 PM IST

Published : May 10, 2021, 10:49 PM IST

cremation
cremation

ಶಿವಮೊಗ್ಗ: ಕೊರೊನಾದಿಂದ ಮೃತರಾದ ಹಿಂದೂ ಮಹಿಳೆಯ ಶವ ಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಘಟನೆ ಶಿಕಾರಿಪುರದಲ್ಲಿ‌ ನಡೆದಿದೆ.

ಶಿಕಾರಿಪುರದ ಚುಂಚನಕೂಪ್ಪದ ಮಹಿಳೆ ರುದ್ರಿಬಾಯಿ ಅವರು ಕೊರೊನಾದಿಂದ ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಂಬಂಧಿಕರು ಮಹಿಳೆಯ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕಿದ್ದಾರೆ.

ಈ ವಿಷಯ ತಿಳಿದ ಶಿಕಾರಿಪುರದ ಮಹಮ್ಮದ್ ಇರ್ಫಾನ್ ಹಾಗೂ ಅವರ ಸ್ನೇಹಿತರ ಆರು ಜನರ ತಂಡ ರುದ್ರಿಬಾಯಿ ಅವರ ಅಂತ್ಯ ಸಂಸ್ಕಾರವನ್ನು ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ನಡೆಸಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ಸುರಕ್ಷಿತವಾಗಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇದು ಅಲ್ಲಿನ ಜನರ ಪ್ರಸಂಶೆಗೂ ಪಾತ್ರವಾಗಿದೆ.

For All Latest Updates

ABOUT THE AUTHOR

...view details