ಕರ್ನಾಟಕ

karnataka

By

Published : Jan 5, 2020, 4:47 PM IST

ETV Bharat / state

ಮೆಡಿಕಲ್​ ಕಾಲೇಜು ನಿರ್ದೇಶಕರನ್ನು ಅಯೋಗ್ಯ ನನ್‌__ ಎಂದ ಸಚಿವ ಕೆ ಎಸ್‌ ಈಶ್ವರಪ್ಪ..

ಶಿವಮೊಗ್ಗ ಮೆಡಿಕಲ್​ ಕಾಲೇಜು ನಿರ್ದೇಶಕ ಡಾ.ಲೇಪಾಕ್ಷಿ ಅವರನ್ನು ಅಯೋಗ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ತೆಗಳಿದ್ದಾರೆ. ಸಿಮ್ಸ್​ ನಿರ್ದೇಶಕ ಸ್ಥಾನದಿಂದ ಅವನನ್ನು ಕೆಳಗೆ ಇಳಿಸುವವರೆಗೂ ಅಲ್ಲಿಗೆ ಬರುವುದಿಲ್ಲ ಎಂದು ಏಕವಚನದಲ್ಲಿ ರೇಗಿದ್ದಾರೆ.

k.s.Eshwarappa angry on medical college director
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಇಲ್ಲಿನ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಹೆಚ್ ಲೇಪಾಕ್ಷಿ ಅವರನ್ನು ಅಯೋಗ್ಯ ನನ್‌__ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ನಿಂದಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ..

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸಚಿವ ಈಶ್ವರಪ್ಪ ಕರೆ ಮಾಡಿದ್ದಾರೆ. ರಾಘವೇಂದ್ರ ಜೊತೆ ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಗರಂ ಆಗಿ ಮಾತನಾಡಿದ್ದಾರೆ.

ಅವನ ಮುಖ ನೋಡಲು ನಂಗೆ ಇಷ್ಟವಿಲ್ಲ. ಮೊದಲು ಲೇಪಾಕ್ಷಿಯನ್ನು ಕಿತ್ತು ಹಾಕಿ, ಆಮೇಲೆ ನಾನು ಸಿಮ್ಸ್​ಗೆ ನಿನ್ನೊಂದಿಗೆ ಬರುತ್ತೇನೆ. ಇಲ್ಲದಿದ್ದರೆ ನೀನೊಬ್ಬನೇ ಹೋಗು ಎಂದು ಸಂಸದ ರಾಘವೇಂದ್ರ ಅವರಿಗೆ ಮೊಬೈಲ್‌ನಲ್ಲಿಯೇ ಹೇಳಿರೋದು ವಿಡಿಯೋದಲ್ಲಿದೆ.

ABOUT THE AUTHOR

...view details