ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸಿದ ಪ್ರಕರಣ.. ದೂರು ದಾಖಲು

ಇಂದು ಬೆಳಗ್ಗೆ 6:30 ರ ಸಮಯಕ್ಕೆ ಅನಾಮಧೇಯ ವ್ಯಕ್ತಿಗಳು ಕಾಲೇಜಿನ ಆವರಣಕ್ಕೆ ಆಗಮಿಸಿದ್ದಾರೆ. ನಮ್ಮ ಕಾಲೇಜಿನ ರಾತ್ರಿ ಕಾವಲುಗಾರ ಇವರನ್ನು ತಡೆಯಲು ಯತ್ನಿಸಿದರು ಸಹ ಆತನ ಮೇಲೆಯೇ ದಬ್ಬಾಳಿಕೆ ನಡೆಸಿ, ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂದು ಕೋಟೆ ಪೊಲೀಸ್ ಠಾಣೆಗೆ ಕಾಲೇಜಿನ‌ ಪ್ರಾಂಶುಪಾಲರಾದ ಧನಂಜಯ ದೂರು ನೀಡಿದ್ದಾರೆ.

By

Published : Feb 9, 2022, 3:15 PM IST

ರಾಷ್ಟ್ರಧ್ವಜ ಹಾರಿಸಿದ ಎನ್​​ಎಸ್‍ಯುಐ
ರಾಷ್ಟ್ರಧ್ವಜ ಹಾರಿಸಿದ ಎನ್​​ಎಸ್‍ಯುಐ

ಶಿವಮೊಗ್ಗ :ಇಂದು ಬೆಳಗ್ಗೆ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್ಎಸ್​​ಯುಐ ಸಂಘಟನೆಯ ಕಾರ್ಯಕರ್ತರ ರಾಷ್ಟ್ರಧ್ವಜವನ್ನು ಹಾರಿಸಿದ್ದರು. ಈ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಧನಂಜಯ್ ಅವರು ಇಂದು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಿನ್ನೆ ಇದೇ ಕಾಲೇಜಿನಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ಕುರಿತು ಸೇರಿದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ನಂತರ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದ. ಇದರಿಂದ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು, ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಇಂದು ಬೆಳಗ್ಗೆ 6:30ರ ಸಮಯಕ್ಕೆ ಅನಾಮಧೇಯ ವ್ಯಕ್ತಿಗಳು ಕಾಲೇಜಿನ ಆವರಣಕ್ಕೆ ಆಗಮಿಸಿದ್ದಾರೆ. ನಮ್ಮ ಕಾಲೇಜಿನ ರಾತ್ರಿ ಕಾವಲುಗಾರ ಇವರನ್ನು ತಡೆಯಲು ಯತ್ನಿಸಿದರೂ ಸಹ ಆತನ ಮೇಲೆಯೇ ದಬ್ಬಾಳಿಕೆ ನಡೆಸಿ, ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂದು ಕೋಟೆ ಪೊಲೀಸ್ ಠಾಣೆಗೆ ಕಾಲೇಜಿನ‌ ಪ್ರಾಂಶುಪಾಲರಾದ ಧನಂಜಯ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಕೋಟೆ ಪೊಲೀಸರು ರಾಷ್ಟ್ರಧ್ವಜ ಹಾರಿಸಿದ ಎನ್​​ಎಸ್​​ಯುಐ ಕಾರ್ಯಕರ್ತರ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ: ನಿನ್ನೆ ಕೇಸರಿ ಧ್ವಜ ಇಂದು ರಾಷ್ಟ್ರಧ್ವಜ ಹಾರಿಸಿದ ಎನ್​​ಎಸ್‍ಯುಐ

For All Latest Updates

TAGGED:

ABOUT THE AUTHOR

...view details