ಕರ್ನಾಟಕ

karnataka

ETV Bharat / state

ರಾಮನಗರಕ್ಕಾದ ನಷ್ಟವನ್ನು ಉಸ್ತುವಾರಿ ಸಚಿವರೇ ತುಂಬಿಕೊಡಲಿ: ಹೆಚ್​​.ಸಿ.ಬಾಲಕೃಷ್ಣ

ಗ್ರೀನ್​ ಝೋನ್​ನಲ್ಲಿದ್ದ ರಾಮನಗರ ಜಿಲ್ಲೆಯನ್ನು ರೆಡ್​ಜೋನ್​ ಸ್ಥಿತಿಗೆ ತಲುಪುವಂತೆ ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಹೀಗಾಗಿ ಜಿಲ್ಲೆಗಾದ ನಷ್ಟವನ್ನು ಉಸ್ತುವಾರಿ ಸಚಿವರೇ ತುಂಬಿಕೊಡಬೇಕು ಎಂದು ಮಾಜಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಒತ್ತಾಯಿಸಿದರು.

By

Published : Apr 27, 2020, 10:01 AM IST

the Ramanagara is turns redzone from green zone
ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ

ರಾಮನಗರ: ಜಿಲ್ಲಾ ಉಸ್ತುವಾರಿ ಸಚಿವರ ನಡೆ ಹಾಗೂ ಸರ್ಕಾರದ ಬೇಜವಬ್ದಾರಿತನದ ಫಲವಾಗಿ ಗ್ರೀನ್ ಝೋನ್​​​ನಲ್ಲಿದ್ದ ರಾಮನಗರ ಜಿಲ್ಲೆ ರೆಡ್ ಝೋನ್​​​ಗೆ ಸ್ಥಿತಿಗೆ ಮರಳಿದೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಾಡಿದ ತಪ್ಪು ನಿರ್ಧಾರದಿಂದಾಗಿ ಇಂದು ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ಇದರಿಂದ ವ್ಯಾಪರ ವಹಿವಾಟು ನಿಂತು, ಜಿಲ್ಲೆಗೆ ಸಾಕಷ್ಟು ನಷ್ಟವಾಗಿದೆ. ಈ ನಷ್ಟವನ್ನ ಸರ್ಕಾರ ಇಲ್ಲವೇ ಉಸ್ತುವಾರಿ ಸಚಿವರೇ ಭರಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ

ಜಿಲ್ಲಾ ಕಾರಾಗೃಹದಲ್ಲಿದ್ದ 177 ವಿಚಾರಣಾದೀನ ಕೈದಿಗಳ ಪೈಕಿ 17 ಮಂದಿಯನ್ನ ಮಾತ್ರ ಏಕೆ ಕಾರಾಗೃಹದಲ್ಲೇ ಇರಿಸಿಕೊಂಡಿದ್ದರು ಎಂದು ಪ್ರಶ್ನಿಸಿದ ಅವರು, 17 ಮಂದಿ ವಿಚಾರಣಾದೀನ ಕೈದಿಗಳಿಂದ ಪಾದರಾಯನಪುರ ಆರೋಪಿಗಳಿಗೆ ಅಗತ್ಯ ಕೆಲಸಗಳನ್ನು ಅಧಿಕಾರಿಗಳು ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಆ ಆರೋಪಿಗಳನ್ನು ಇಲ್ಲಿ ಇರಿಸಿಕೊಳ್ಳಲು ಆದೇಶ ಬಂದಿತ್ತಾ? ಹಾಗೇನಾದರೂ ಆದೇಶ ಪತ್ರ ಬಂದಿದ್ದರೆ ಅದನ್ನು ಬಹಿರಂಗ ಪಡಿಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ABOUT THE AUTHOR

...view details