ಕರ್ನಾಟಕ

karnataka

ವಿದ್ಯುತ್ ಕಡಿತ ಸಮಸ್ಯೆಗೆ ಗುಡ್​ ಬೈ: ಅನ್ನದಾತರಿಗೆ ನೆರವಾದ 'ಸೂರ್ಯ ರೈತ' ಯೋಜನೆ

ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ ಡಿ.ಕೆ ಶಿವಕುಮಾರ್ ಜಾರಿಗೆ ತಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೇ 'ಸೂರ್ಯ ರೈತ ಯೋಜನೆ'. ಪ್ರಾರಂಭಿಕ ಹಂತವಾಗಿ ‌ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

By

Published : Feb 23, 2021, 5:22 PM IST

Published : Feb 23, 2021, 5:22 PM IST

Surya Raitha Project, which Solved the power problem of farmers
ಅನ್ನದಾತರಿಗೆ ನೆರವಾದ 'ಸೂರ್ಯ ರೈತ' ಯೋಜನೆ

ರಾಮನಗರ:ರಾಜ್ಯಾದ್ಯಂತ ರೈತರು ಕೃಷಿಗೆ ನೀರು ಹಾಯಿಸಲು ವಿದ್ಯುತ್​ ಸಮಸ್ಯೆ ಎದುರಿಸುತ್ತಿದ್ದರೆ, ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ರೈತರು ಮಾತ್ರ ಇದ್ಯಾವುದೇ ಸಮಸ್ಯೆ ಇಲ್ಲದೇ, ಸೂರ್ಯ ರೈತ ಯೋಜನೆಯಿಂದ ವಿದ್ಯುತ್ ತಯಾರು ಮಾಡುತ್ತಿದ್ದಾರೆ.

ಏನಿದು ಸೂರ್ಯ ರೈತ ಯೋಜನೆ: ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ ಡಿ.ಕೆ ಶಿವಕುಮಾರ್ ಜಾರಿಗೆ ತಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೇ 'ಸೂರ್ಯ ರೈತ ಯೋಜನೆ'. ಪ್ರಾರಂಭಿಕ ಹಂತವಾಗಿ ‌ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

ಅನ್ನದಾತರಿಗೆ ನೆರವಾದ 'ಸೂರ್ಯ ರೈತ' ಯೋಜನೆ

ಹಾರೋಬೆಲೆ ಗ್ರಾಮದ ಎಲ್ಲ ರೈತರಿಗೂ ಅವರವರ ಜಮೀನಿನಲ್ಲಿ ಉಚಿತವಾಗಿ ಸೋಲಾರ್ ಅಳವಡಿಸಿ ಕೊಡುವುದು. ರೈತರ ಕೊಳವೆ ಬಾವಿಯ ಪಂಪ್​ಸೆಟ್​ಗೆ ಸೋಲಾರ್​ನಿಂದ ವಿದ್ಯುತ್​ ಸಂಪರ್ಕ ಕೊಡಿಸಿ, ಬೆಳಗ್ಗೆ ಸೂರ್ಯ ಉದಯ ಆದಾಗಿನಿಂದ, ಸಂಜೆ ಸೂರ್ಯಾಸ್ತವಾಗುವವರೆಗೆ ಎಷ್ಟು ಬೇಕಾದರೂ ನೀರು ಬಳಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ. ಸರ್ಕಾರದ ಯೋಜನೆಯಂತೆ, ಗ್ರಾಮದಲ್ಲಿ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿದೆ.

ರೈತರು ಸೋಲಾರ್​ನಿಂದ ಉತ್ಪತಿಯಾಗುವ ವಿದ್ಯುತ್​ ಅನ್ನು ಕೃಷಿ ಕಾರ್ಯಕ್ಕೆ ಬಳಸಿಕೊಂಡ ಬಳಿಕ, ಇತರ ಕಾರ್ಯಗಳಿಗೆ ಉಪಯೋಗಿಸಬಹುದು. ಇನ್ನು, ತಮ್ಮ ಜಮೀನಿನಲ್ಲಿ ಉತ್ಪಾದನೆಯಾಗುವ ವಿದ್ಯುತ್​ ಅನ್ನು ಬೆಸ್ಕಾಂಗೆ ಮಾರಾಟ ಕೂಡ ಮಾಡಬಹುದು. ಇದರಿಂದಲೂ ರೈತರಿಗೆ ಲಾಭವಾಗುತ್ತದೆ.

ರೈತ ಸಮುದಾಯದ ಅನುಕೂಲಕ್ಕಾಗಿಯೇ ಈ ದೊಡ್ಡ‌ ಯೋಜನೆ ರೂಪಿಸಲಾಗಿತ್ತು. ರೈತರಿಗೆ 24 ಗಂಟೆ ನಿರಂತರ ವಿದ್ಯುತ್ ನೀಡಿ ಆರ್ಥಿಕ ಸುಧಾರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸೂರ್ಯ ರೈತ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ರೈತರು ಆರೋಗ್ಯಕರ ವ್ಯವಸಾಯ ಮಾಡಲು ಅನುಕೂಲವಾಗುತ್ತಿದೆ. ಪಟ್ಟಣ ಬಿಟ್ಟು ಬಹಳಷ್ಟು ಜನರು ಹಾರೋಬೆಲೆ ಗ್ರಾಮಕ್ಕೆ ಬಂದು ವ್ಯವಸಾಯ ಮಾಡುತ್ತಿದ್ದಾರೆ.

ABOUT THE AUTHOR

...view details