ಕರ್ನಾಟಕ

karnataka

ETV Bharat / state

ಶಾಸಕರ ಫೈಟ್​ ಪ್ರಕರಣ... ಕಂಪ್ಲಿ ಶಾಸಕ ಗಣೇಶ್ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

ಇಂದು ನಡೆಯಬೇಕಿದ್ದ ಶಾಸಕ ಕಂಪ್ಲಿ ಗಣೇಶ್​ ಅವರ ವಿಚಾರಣೆಯನ್ನು ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಯವು ಸೆ.5 ಕ್ಕೆ ಮುಂದೂಡಿದೆ.

By

Published : Jun 27, 2019, 8:07 PM IST

ಕಂಪ್ಲಿ ಶಾಸಕ ಗಣೇಶ್

ರಾಮನಗರ :ಶಾಸಕ ಆನಂದ್​ ಸಿಂಗ್​ ಮೇಲೆ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಸಕ ಕಂಪ್ಲಿ‌ ಗಣೇಶ್ ರಾಮನಗರ ಕೋರ್ಟ್ ಗೆ ಹಾಜರಾದರು.

ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಯದಲ್ಲಿ ಇಂದು ಇದ್ದ ವಿಚಾರಣೆಯನ್ನು ಸೆ.5 ಕ್ಕೆ ಮುಂದೂಡಿ ನ್ಯಾ. ನರಹರಿ ಕುಲಕರ್ಣಿ ಅದೇಶ ಹೊರಡಿಸಿದ್ದಾರೆ.

ಘಟನೆ ವಿವರ

ಸರ್ಕಾರ ಅಸ್ಥಿರ ಸಂಬಂಧ ಶಾಸಕರನ್ನ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಲಾಗಿತ್ತು. ಆ ವೇಳೆ ಜ.21 ರಂದು ಬಿಡದಿ‌ ಈಗಲ್ ಟನ್ ರೆಸಾರ್ಟ್ ನಲ್ಲಿ‌ ಶಾಸಕರ ಹೊಡೆದಾಟ ಮಾಡಿಕೊಂಡಿದ್ದರು. ಶಾಸಕ‌ ಆನಂದ್ ಸಿಂಗ್‌ ಮೇಲೆ ಕಂಪ್ಲಿ‌ ಶಾಸಕ ಗಣೇಶ್ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ್ದರು ಈ ಸಂಬಂಧ ಬಿಡದಿ‌ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ವಿಚಾರಣಾ ದಿನಾಂಕ ಮುಂದೂಡಿ ಆದೇಶಿಸಲಾಗಿದೆ.

ABOUT THE AUTHOR

...view details