ಕರ್ನಾಟಕ

karnataka

ETV Bharat / state

ಆನಂದ್​ ಸಿಂಗ್​ ಮೇಲೆ ಗಣೇಶ್​ ಹಲ್ಲೆ ಪ್ರಕರಣ: ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕೇಸ್​ ವರ್ಗಾವಣೆ

ಬಿಡದಿಯ ಈಗಲ್​ಟನ್​ನಲ್ಲಿ ರೆಸಾರ್ಟ್​ನಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಮಾಡಿದ್ದರು. ಈ ಹಿನ್ನೆಲೆ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದಾರೆ.

By

Published : Nov 15, 2019, 8:55 AM IST

ಆನಂದ್​ ಸಿಂಗ್​ ಮೇಲೆ ಗಣೇಶ್​ ಹಲ್ಲೆ ಪ್ರಕರಣ

ರಾಮನಗರ: ಬಿಡದಿಯ ಈಗಲ್​ಟನ್ ರೆಸಾರ್ಟ್​ನಲ್ಲಿ ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವಿನ ಹೊಡೆದಾಟ ಪ್ರಕರಣದ ಸಂಬಂಧ ಗುರುವಾರ ಕಂಪ್ಲಿ ಶಾಸಕ ಗಣೇಶ್ ನ್ಯಾಯಾಲಯಕ್ಕೆ‌ ಹಾಜರಾಗಿದ್ದರು.

ಬಿಡದಿಯ ಈಗಲ್ ಟನ್​ನಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದ ವೇಳೆ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಮಾಡಿದ್ದರು. ಆನಂದ್ ಸಿಂಗ್ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ರು. ಈ ಸಂಬಂಧ ಶಾಸಕ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ಕಂಪ್ಲಿ ಗಣೇಶ್ ವಿರುದ್ಧ ದೂರು ದಾಖಲಿಸಿದ್ದರು.

ಆನಂದ್​ ಸಿಂಗ್​ ಮೇಲೆ ಗಣೇಶ್​ ಹಲ್ಲೆ ಪ್ರಕರಣ

ಈ ಎಲ್ಲಾ ಘಟನೆ ಹಿನ್ನೆಲೆ ಮತ್ತೆ ವಿಚಾರಣೆ ಎದುರಿಸಲು ನ್ಯಾಯಾಲಯಕ್ಕೆ ಕಂಪ್ಲಿ ಗಣೇಶ್ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುಲಕರ್ಣಿ ನರಹರಿ ಅವರು ಈ ಪ್ರಕರಣವನ್ನು ರಾಮನಗರದ ಸಿಜೆಎಂ ನ್ಯಾಯಾಲಯದಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದಾರೆ.

ABOUT THE AUTHOR

...view details