ಕರ್ನಾಟಕ

karnataka

ETV Bharat / state

ಗ್ರಾಮಕ್ಕೆ ನುಗ್ಗಿದ ತೋಳ... 15 ಕ್ಕೂ ಹೆಚ್ಚು ಜನರ ಮೇಲೆ ದಾಳಿ

ಕಾಡಿನಿಂದ ನಾಡಿಗೆ ಬಂದ ತೋಳವೊಂದು ಜನರ ಮೇಲೆ ದಾಳಿ ಮಾಡಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಸಮೀಪದ ಚಿಲ್ಕರಾಗಿ, ಇರಕಲ್ ಗ್ರಾಮಗಳಲ್ಲಿ ನಡೆದಿದೆ.

By

Published : Feb 9, 2020, 11:57 AM IST

ಜನರ ಮೇಲೆ ತೋಳ ದಾಳಿ
Wolf attack on people

ರಾಯಚೂರು:ಜಿಲ್ಲೆಯಲ್ಲಿ ಕಾಡಿನಿಂದ ನಾಡಿಗೆ ಬಂದ ತೋಳವೊಂದು ಜನರ ಮೇಲೆ ಅಟ್ಟಹಾಸ ಮೆರೆದಿದೆ. ತೋಳದ ದಾಳಿಯಿಂದ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿರವಾರ ತಾಲೂಕಿನ ಕವಿತಾಳ ಸಮೀಪದ ಚಿಲ್ಕರಾಗಿ, ಇರಕಲ್ ಗ್ರಾಮಗಳಲ್ಲಿ ನಡೆದಿದೆ.

ತೋಳ ದಾಳಿಯಿಂದ 15 ಕ್ಕೂ ಹೆಚ್ಚು ಜನರಿಗೆ ಗಾಯ

ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿದಂತೆ ಹಲವರು ಜನರು ಗಾಯಗೊಂಡಿದ್ದರೆ, ಇರಕಲ್ ಗ್ರಾಮದಲ್ಲಿ ಮೂವರಿಗೆ ತೋಳ ಕಚ್ಚಿದೆ. ಗಾಯಾಳುಗಳನ್ನು ಲಿಂಗಸೂಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ಹೊಡೆದು ಕೊಂದಿದ್ದಾರೆ.

ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಯಾವುದೇ ಅಧಿಕಾರಿ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details