ಕರ್ನಾಟಕ

karnataka

By

Published : Aug 2, 2020, 10:41 PM IST

ETV Bharat / state

ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ ರೌಡಿ ಶೀಟರ್​​ಗಳಿಗೆ ಎಚ್ಚರಿಕೆ

ರೌಡಿ ಶೀಟರ್​ಗಳಿಂದ ಆ.5 ಅಯೋಧ್ಯೆ ಭೂಮಿ ಪೂಜೆ ದಿನ ಕೋಮು ಗಲಭೆ ಸೃಷ್ಟಿಸುವ ಮಾಹಿತಿ ಹಿನ್ನೆಲೆ ರಾಯಚೂರಿನ ಸದರ್​ ಬಜಾರ್ ಹಾಗೂ ನೇತಾಜಿ ಪೊಲೀಸ್​ ಠಾಣೆ ರೌಡಿ ಶೀಟರ್​ಗಳಿಗೆ ಸಿಪಿಐ ಫಾಸಿಯುದ್ದಿನ್​ ಖಡಕ್​ ಎಚ್ಚರಿಕೆ ನೀಡಿದರು.

Warning to rowdy sheaters in raichur
ರಾಯಚೂರಿನ ರೌಡಿ ಶೀಟರ್​ಗಳಿಗೆ ಎಚ್ಚರಿಕೆ

ರಾಯಚೂರು: ಆ.5 ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ ಹಿನ್ನೆಲೆ ಕೋಮು ಗಲಭೆ ಉಂಟಾಗುವ ಮಾಹಿತಿ ಮೇರೆಗೆ ರೌಡಿ ಶೀಟರ್​ಗಳಿಗೆ ಸಿಪಿಐ ಫಾಸಿಯುದ್ದಿನ್ ಎಚ್ಚರಿಕೆ ನೀಡಿದರು.

ರಾಯಚೂರಿನ ರೌಡಿ ಶೀಟರ್​ಗಳಿಗೆ ಎಚ್ಚರಿಕೆ

ನಗರದ ಸದರ್ ಬಜಾರ್​ನ ಠಾಣೆಯ 22 ರೌಡಿ ಶೀಟರ್​ಗಳು ಹಾಗೂ ನೇತಾಜಿ ಪೊಲೀಸ್​ ಠಾಣೆಯ 20 ರೌಡಿ ಶೀಟರ್​ಗಳಿಗೆ ಠಾಣೆಗೆ ಕರೆಸಿ ಕಾನೂನು ನಿಯಮ ಉಲ್ಲಂಘಿಸದಂತೆ ಸೂಚಿಸಿದರು. ಕೋಮುಗಲಭೆ, ಗಲಾಟೆ ಹಾಗೂ ಪ್ರಚೋದಿಸುವ ಕೆಲಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಿದರು.

ಆ ದಿನ ರೌಡಿ ಶೀಟರ್​​ಗಳು ಮನೆಯಲ್ಲಿಯೇ ಇರಬೇಕು. ಹೊರಗಡೆ ಬರಬಾರದು. ನಿಯಮ ಮೀರಿ ಕಾಣಿಸಿಕೊಂಡಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details