ರಾಯಚೂರು: ಮುಂಬೈನಿಂದ ನಗರಕ್ಕೆ ಬಂದಿದ್ದ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರಿದ್ದ ಬಡಾವಣೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.
ಮೂವರಿಗೆ ಕೊರೊನಾ: ದಿನದ ಮಟ್ಟಿಗೆ ರಾಯಚೂರು ನಗರ ಲಾಕ್ಡೌನ್
ರಾಯಚೂರು ನಗರದಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆ ಬಡಾವಣೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.
ಸ್ಯಾನಿಟೈಸರ್ ಸಿಂಪಡಣೆ
ನಗರದ ಗೋಶಾಲಾ ರಸ್ತೆಯ ಸಿಯತಾಲಾಬ್ ಏರಿಯಾದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ನಡೆಯಿತು. ಮುಂಬೈನಿಂದ ಬಂದ ವಲಸಿಗರನ್ನು ತಕ್ಷಣ ಕ್ವಾರಂಟೈನ್ಗೆ ಒಳಪಡಿಸಿ ಅವರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗಿತ್ತು. ಆಗ ಕೊರೊನಾ ಇರುವುದು ದೃಢಪಟ್ಟಿದೆ.
ಕೂಡಲೇ ಅವರನ್ನು ಐಸೋಲೇಷನ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಇಂದು ಅವರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತ ನಡೆಸಿದೆ. ಅಲ್ಲದೆ ರಾಯಚೂರು ನಗರದಲ್ಲಿ ಒಂದು ದಿನದ ಮಟ್ಟಿಗೆ ಲಾಕ್ಡೌನ್ ಜಾರಿ ಮಾಡಲಾಗಿದೆ.