ಲಿಂಗಸುಗೂರು (ರಾಯಚೂರು): ಬಿಜೆಪಿಯ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ ಗಸ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಷ್ಮಾ ಗಸ್ತಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಪತ್ರ ಕಳುಹಿಸಿದ್ದಾರೆ.
ಅಶೋಕ ಗಸ್ತಿ ಪತ್ನಿಗೆ ಪ್ರಧಾನಿ ಮೋದಿಯಿಂದ ಸಾಂತ್ವನ ಪತ್ರ
ಕೊರೊನಾದಿಂದಾಗಿ ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆ ಆಗಿದ್ದ ಅಶೋಕ ಗಸ್ತಿ ಅವರು ಸಾವನ್ನಪ್ಪಿದ ಹಿನ್ನೆಲೆ ಪ್ರಧಾನಿ ಮೋದಿ ಅವರು ಅಶೋಕ ಗಸ್ತಿ ಅವರ ಪತ್ನಿಗೆ ಸಾಂತ್ವನ ಪತ್ರ ಕಳುಹಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಸಾಂತ್ವನ ಪತ್ರ
ಅತ್ಯಂತ ಬಡಕುಟುಂಬದಲ್ಲಿ ಜನಿಸಿ, ನಿಷ್ಠಾವಂತರಾಗಿ ತಳಮಟ್ಟದಿಂದ ಪಕ್ಷದ ಸಂಘಟನೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಅಶೋಕ ಗಸ್ತಿ ನಮ್ಮ, ನಿಮ್ಮಿಂದ ದೂರ ಆಗಿರಬಹುದು. ಆದರೆ, ಅವರ ವಿಚಾರಧಾರೆ ನಮ್ಮೊಂದಿಗೆ ಇವೆ. ಅಂತಹ ಅಸಾಮಾನ್ಯ ವ್ಯಕ್ತಿತ್ವ ನಮ್ಮನ್ನು ಅಗಲಿದ್ದು ದುಃಖ ತಂದಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಸಾಂತ್ವನ ಪತ್ರದಲ್ಲಿ ಉಲ್ಲೇಖಿಸಿ ಮೋದಿ ಪ್ರಾರ್ಥಿಸಿದ್ದಾರೆ.
ಕೊರೊನಾದಿಂದಾಗಿ ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆ ಆಗಿದ್ದ ಅಶೋಕ ಗಸ್ತಿ ಅವರು ಸಾವನ್ನಪ್ಪಿದ್ದಾರೆ.