ಕರ್ನಾಟಕ

karnataka

ಹಣಕಾಸಿನ ವಿಚಾರವಾಗಿ ವ್ಯಕ್ತಿಯ ಕಿಡ್ನಾಪ್​: ಮಗನನ್ನು ಕರೆತರುವಂತೆ ಹೆತ್ತವರ ಕಣ್ಣೀರು

By

Published : Nov 19, 2019, 10:15 AM IST

ಹಣಕಾಸಿನ ವಿಚಾರವಾಗಿ ಬೆಂಗಳೂರಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತ ರಾಯಚೂರು ಜಿಲ್ಲೆಯಲ್ಲಿರುವ ಆತನ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ತಮ್ಮ ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಆಳಲು ತೋಡಿಕೊಂಡಿದ್ದಾರೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯೋರ್ವನ ಅಪಹರಣ : ಪೋಷಕರ ಅಳಲು

ರಾಯಚೂರು:ಹಣಕಾಸಿನ ವಿಚಾರವಾಗಿ ಬೆಂಗಳೂರಿನಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತಂಕಗೊಂಡಿರುವ ಆತನ ಪೋಷಕರು ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಹಣಕಾಸಿನ ವಿಚಾರವಾಗಿ ವ್ಯಕ್ತಿಯ ಕಿಡ್ನಾಪ್​: ಮಗನನ್ನು ಕರೆತರುವಂತೆ ಹೆತ್ತವರ ಕಣ್ಣೀರು

ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊನವಾಟ್ಲತಾಂಡ-2 ನಿವಾಸಿ ಪ್ರಕಾಶ್​ ರಾಠೋಡ ಅಪಹರಣಕ್ಕೆ ಒಳಗಾಗಿರುವ ವ್ಯಕ್ತಿ. ಈತ ಬೆಂಗಳೂರಿಗೆ ಕುಟುಂಬದವರೊಡನೆ ಕೂಲಿ ಕೆಲಸಕ್ಕೆ ತೆರಳಿದ್ದ. ಕಳೆದ ಭಾನುವಾರ ಬೆಂಗಳೂರಲ್ಲಿ ನಾಲ್ಕೈದು ಜನರ ತಂಡ ವಾಹನದಲ್ಲಿ ಬಂದು ಅಪರಹಣ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಪ್ರಕಾಶ್​ ರಾಠೋಡ ಸ್ನೇಹಿತ ಮಂಜುನಾಥಗೆ ಅಪಹರಣಕಾರರು ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕಾಶ್​ ಹಣಕಾಸಿನ ವಿಚಾರವಾಗಿ ಸುಮಾರು 3.5 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಈ ಹಣವನ್ನ ಹಲವು ದಿನಗಳಿಂದ ನೀಡುತ್ತಿಲ್ಲವೆಂಬ ಕಾರಣ ಅಪಹರಣ ಮಾಡಲಾಗಿದ್ದು, ಹಣ ತಂದರೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ದುಡಿದು ತಿನ್ನುವ ಪರಿಸ್ಥಿತಿಯಲ್ಲಿರುವ ಪ್ರಕಾಶ್​ ರಾಠೋಡನ ಪೋಷಕರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನಾವು ಎಲ್ಲಿಂದ ಹಣ ಹೊಂದಿಸೋದೆಂದು ದಿಕ್ಕು ತೋಚದಂತಾಗಿದ್ದಾರೆ.

ABOUT THE AUTHOR

...view details