ಕರ್ನಾಟಕ

karnataka

ETV Bharat / state

ಪ್ರತಾಪ‌ಗೌಡ ಪಾಟೀಲ್ ಸೇಲ್ ಆಗುವಂತಹ ವ್ಯಕ್ತಿಯಲ್ಲ : ಶಾಸಕ ರೇಣುಕಾಚಾರ್ಯ

ಬಿಜೆಪಿ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತ ಕೇಳುತ್ತಿದ್ದೇವೆ. ಮಸ್ಕಿ ಕ್ಷೇತ್ರದಲ್ಲಿ 35% ಮಾತ್ರ ಕಾಂಗ್ರೆಸ್ ಬಗ್ಗೆ ಮತದಾರರಿಗೆ ಒಲವಿದ್ದರೆ, ಶೇ.65% ಮತದಾರರ ಒಲವು ಬಿಜೆಪಿ ಕಡೆಯಿದೆ. ಎಲ್ಲೆಡೆ ವಿಜಯೇಂದ್ರ ಬರಬೇಕು ಅಂತ ಕೇಳ್ತಾರೆ. ವಿಜಯೇಂದ್ರ ಯೂತ್ ಐಕಾನ್. ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ..

By

Published : Apr 5, 2021, 5:15 PM IST

MLA MP Renukacharya
ಶಾಸಕ ರೇಣುಕಾಚಾರ್ಯ

ರಾಯಚೂರು :ಪ್ರತಾಪ‌ಗೌಡ ಪಾಟೀಲ್ ಸೇಲ್ ಆಗುವಂತಹ ವ್ಯಕ್ತಿಯಲ್ಲ ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

ಬಿಜೆಪಿಯ ಪ್ರತಾಪಗೌಡ ಪರ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರಚಾರ

ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪಕ್ಷ ಬಿಟ್ಟು ಬಂದಿದ್ದಾರೆ. ಕಾಂಗ್ರೆಸ್​ನವರು ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್​ನಿಂದ ಕಾಂಗ್ರೆಸ್​​ಗೆ ಯಾಕೆ? ಬಂದ್ರು ಅದನ್ನ ಹೇಳಬೇಕು ಎಂದರು.

ಬಿಜೆಪಿ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತ ಕೇಳುತ್ತಿದ್ದೇವೆ. ಮಸ್ಕಿ ಕ್ಷೇತ್ರದಲ್ಲಿ 35% ಮಾತ್ರ ಕಾಂಗ್ರೆಸ್ ಬಗ್ಗೆ ಮತದಾರರಿಗೆ ಒಲವಿದ್ದರೆ, ಶೇ.65% ಮತದಾರರ ಒಲವು ಬಿಜೆಪಿ ಕಡೆಯಿದೆ. ಎಲ್ಲೆಡೆ ವಿಜಯೇಂದ್ರ ಬರಬೇಕು ಅಂತ ಕೇಳ್ತಾರೆ. ವಿಜಯೇಂದ್ರ ಯೂತ್ ಐಕಾನ್. ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದರು.

ABOUT THE AUTHOR

...view details