ಕರ್ನಾಟಕ

karnataka

ETV Bharat / state

ರಾಯಚೂರು:ಲಾಡ್ಜ್​​ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ತುರುವಿಹಾಳ ಗ್ರಾಮದ ಅಭಿಷೇಕ ಕಳೆದ 1ರಂದು ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಲಾಡ್ಜ್​​​ವೊಂದರಲ್ಲಿ ತಂಗಿದ್ದಾನೆ. ಆದ್ರೆ ಕೊಠಡಿಯೊಳಗಡೆಯಿಂದ ಹೊರಗಡೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ವಿಚಾರಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.

By

Published : Dec 3, 2020, 11:52 AM IST

Dead body found in raichur; case registered
ಲಾಡ್ಜ್​​ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ

ರಾಯಚೂರು: ಲಾಡ್ಜ್​​​ವೊಂದರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಮೃತ ದೇಹ ಪತ್ತೆಯಾಗಿರುವ ಘಟನೆ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.

ತುರುವಿಹಾಳ ಗ್ರಾಮದ ಅಭಿಷೇಕ (23) ಮೃತ ಯುವಕ. ಕಳೆದ 1ನೇ ತಾರೀಖಿನಂದು ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಲಾಡ್ಜ್​​​ವೊಂದರಲ್ಲಿ ತಂಗಿದ್ದಾನೆ. ಆದ್ರೆ ಕೊಠಡಿಯೊಳಗಡೆಯಿಂದ ಹೊರಗಡೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ವಿಚಾರಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.

ಈ ಸುದ್ದಿಯನ್ನೂ ಓದಿ:ನಿಷೇಧಾಜ್ಞೆ ಜಾರಿ ಮಾಡಿದ್ರೂ ನಮ್ಮನ್ನು ಏನು ಮಾಡೋಕಾಗಲ್ಲ: ವಾಟಾಳ್

ಇದಾದ ಬಳಿಕ ಪೊಷಕರ ಸಮ್ಮುಖದಲ್ಲಿ ಪೊಲೀಸರು ಶವವನ್ನ ತೆರವುಗೊಳಿಸಿದ್ದಾರೆ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ. ಸದ್ಯ ಘಟನೆಯ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details