ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಮನೆಗೆ ನುಗ್ಗಿ ಕೈಚಳಕ ತೋರಿದ್ದ ಖತರ್ನಾಕ್​ ಖದೀಮ ಅರೆಸ್ಟ್​

ರಾಯಚೂರಿನ ವಿವಿಧೆಡೆ ಸುಮಾರು 6 ಮನೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಬೆಲೆಯ ಬಂಗಾರ ಕದ್ದಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

By

Published : Aug 1, 2019, 2:39 AM IST

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳ ಬಂಧನ

ರಾಯಚೂರು:ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳ ಬಂಧನ

ನಗರದ ನಿಜಲಿಂಗಪ್ಪ ಕಾಲೋನಿ, ಶ್ರೀರಾಮ ನಗರ ಕಾಲೋನಿ, ಬೆಲ್ಲಂ ಕಾಲೋನಿ ಮನೆ ಕಳ್ಳತನ ಮಾಡುತ್ತಿದ್ದ ಖದೀಮನನನ್ನು ಪೊಲೀಸರು ಬಂಧಿಸಿದ್ದಾರೆ. ಕುಲುಸುಂಬಿ ಕಾಲೋನಿ ನಿವಾಸಿ ಸೈಯದ್ ಬಾಬರ್ ಬಂಧಿತ ಆರೋಪಿ.

ಬಾಬರ್​ ನಗರದ ನಾನಾ ಬಡಾವಣೆಗಳ ಆರು ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಪ್ರಕರಣವನ್ನ ಭೇದಿಸಿದ ಪೊಲೀಸರು ಕಳ್ಳನನ್ನು ಬಂಧಿಸಿ ಐದು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details