ಕರ್ನಾಟಕ

karnataka

ETV Bharat / state

ಉರುಳಿಬಿದ್ದ ಟಾಟಾ ಏಸ್​: ಎಂಟು ಜನರಿಗೆ ಗಾಯ

ಸಿಂಧನೂರು ನಗರದಿಂದ ಬಣ್ಣದ ಹಬ್ಬ ಮುಗಿಸಿಕೊಂಡು, ಸ್ನಾನಕ್ಕೆಂದು ಮುಕ್ಕುಂದಿಗೆ ತೆರಳುವ ಮಾರ್ಗ ಮಧ್ಯೆ ಟಾಟಾ ಏಸ್ ದಾರಿಯ ಪಕ್ಕದಲ್ಲಿನ ನಾಲೆಗೆ ಉರುಳಿ ಬಿದ್ದಿದೆ.

By

Published : Mar 23, 2019, 3:21 AM IST

ಉರುಳಿಬಿದ್ದ ಟಾಟಾ ಏಸ್

ರಾಯಚೂರು: ಟಾಟಾ ಏಸ್ ಉರುಳಿ ಬಿದ್ದ ಪರಿಣಾಮ ೮ ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದ‌ ಬಳಿ ಈ ದುರ್ಘಟನೆ ಸಂಭವಿಸಿದೆ. ಸಿಂಧನೂರು ನಗರದಿಂದ ಬಣ್ಣದ ಹಬ್ಬ ಮುಗಿಸಿಕೊಂಡು, ಸ್ನಾನಕ್ಕೆಂದು ಮುಕ್ಕುಂದಿಗೆ ತೆರಳುವ ಮಾರ್ಗ ಮಧ್ಯೆ ಟಾಟಾ ಏಸ್ ದಾರಿಯ ಪಕ್ಕದಲ್ಲಿನ ನಾಲೆಗೆ ಉರುಳಿ ಬಿದ್ದಿದೆ.

ಪರಿಣಾಮ 8 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details