ಮೈಸೂರು: ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದಿಂದ ಅರಮನೆ ಪ್ರವೇಶ ಮಾಡಲಿರುವ ಎರಡನೇ ಹಂತದ ಗಜಪಡೆಗೆ ಇಂದು ಸಾಂಪ್ರದಾಯಿಕ ಪೂಜೆಯನ್ನು ರದ್ದುಗೊಳಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.
ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೇ ಅಭಿಮನ್ಯು ನೇತೃತ್ವದ ಮೊದಲ ಹಂತದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷೀ ಆನೆಗಳು ಆಗಸ್ಟ್ 7 ರಂದು ಗಜಪಯಣದ ಮೂಲಕ ಆಗಮಿಸಿ ಅಗಸ್ಟ್ 10 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಪ್ರವೇಶಿಸಿ ತಾಲೀಮು ಆರಂಭಿಸಿದ್ದವು.
ಇದರ ಜೊತೆಗೆ ಇಂದು ಎರಡನೇ ಹಂತದ ಆನೆಗಳು ಅರಮನೆ ಪ್ರವೇಶ ಮಾಡಲಿದ್ದು, ಅದರಲ್ಲಿ 18 ವರ್ಷದ ಅತ್ಯಂತ ಕಿರಿಯ ಆನೆ ಪಾರ್ಥಸಾರಥಿಯು ರಾಂಪುರ ಶಿಬಿರದಿಂದ ಈಗಾಗಲೇ ಅಗಮಿಸಿದೆ. ಉಳಿದ ಆನೆಗಳಾದ ದುಬಾರಿ ಆನೆ ಶಿಬಿರದ ಶ್ರೀರಾಮ ಮತ್ತು ಸುಗ್ರೀವ ಇದರೊಂದಿಗೆ ಗೋಪಿ ಹಾಗೂ ವಿಜಯ ಸಹ ದುಬಾರೆ ಆನೆ ಶಿಬಿರದಿಂದ ಅರಮನೆ ಪ್ರವೇಶ ಮಾಡಲಿರುವ ಎರಡನೇ ಹಂತದ ಗಜಪಡೆಯ ಆನೆಗಳಾಗಿವೆ.