ಕರ್ನಾಟಕ

karnataka

ತುಂಡಾಗಿ ಬಿದ್ದ ಹೈ ವೋಲ್ಟೇಜ್ ತಂತಿ ತುಳಿದು ಎತ್ತು ಸಾವು

ಗ್ರಾಮದ ಮಹದೇವಪ್ಪ ಎಂಬುವರಿಗೆ ಸೇರಿದ ಎರಡು ಎತ್ತುಗಳಲ್ಲಿ, ಸ್ಥಳದಲ್ಲೇ ಒಂದು ಎತ್ತು ಮೃತಪಟ್ಟಿದೆ. ಮತ್ತೊಂದಕ್ಕೆ ಗಂಭೀರ ಗಾಯವಾಗಿದೆ. ಕೂದಲೆಳೆಯ ಅಂತರದಲ್ಲಿ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

By

Published : Mar 30, 2021, 9:04 PM IST

Published : Mar 30, 2021, 9:04 PM IST

ಎತ್ತು ಸಾವು
ಎತ್ತು ಸಾವು

ಮೈಸೂರು:ತುಂಡಾಗಿ ಬಿದ್ದಿದ್ದ ಹೈ ವೋಲ್ಟೇಜ್ ತಂತಿ ತುಳಿದು ಎತ್ತೊಂದು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ

ಗ್ರಾಮದ ಮಹದೇವಪ್ಪ ಎಂಬುವರಿಗೆ ಸೇರಿದ ಎರಡು ಎತ್ತುಗಳು ತಂತಿ ತುಳಿದಿದ್ದು, ಸ್ಥಳದಲ್ಲೇ ಒಂದು ಎತ್ತು ಮೃತಪಟ್ಟಿದೆ. ಮತ್ತೊಂದಕ್ಕೆ ಗಂಭೀರ ಗಾಯವಾಗಿದ್ದು, ಕೂದಲೆಳೆಯ ಅಂತರದಲ್ಲಿ ರೈತ ಪಾರಾಗಿದ್ದಾನೆ.

ಮನೆಯ ಮುಂಭಾಗದ ನೀರಿನ ತೊಟ್ಟಿಯ ಬಳಿ ಜಾನುವಾರುಗಳನ್ನು ತೊಳೆಯುತ್ತಿದ್ದ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಎತ್ತುಗಳು ತುಳಿದಿವೆ. ಇದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ:ರೌಡಿ ಶೀಟರ್​​ ಕೊಲೆ ಬೆನ್ನಲ್ಲೇ ಬೆಂಬಲಿಗರಿಂದ ಕಂಡ ಕಂಡವರ ಮೇಲೆ ಹಲ್ಲೆ: ನೂರಾರು ವಾಹನಗಳು ಜಖಂ

ABOUT THE AUTHOR

...view details