ಕರ್ನಾಟಕ

karnataka

ETV Bharat / state

ಮಳವಳ್ಳಿ ಬಳಿ ಜಿಂಕೆ ಬೇಟೆಯಾಡಿದ್ದ ಇಬ್ಬರು ಕಿರಾತಕರ ಬಂಧನ

ಬೇಟೆ ನಾಯಿಗಳನ್ನ ಇಟ್ಕೊಂಡು ಮೂಕ ಪ್ರಾಣಿಯ ಬೇಟೆಯಾಡಿದ್ದ ಇಬ್ಬರು ಕಿರಾತಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

By

Published : Apr 14, 2019, 6:02 PM IST

ಜಿಂಕೆ ಬೇಟೆಯಾಡಿದ್ದ ಆರೋಪಿಗಳ ಬಂಧನ

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದ ಕುದುರೆಮಾಳದ ಬಳಿ ಜಿಂಕೆ ಬೇಟೆಯಾಡಿದ್ದ ಇಬ್ಬರು ಕಿರಾತಕರನ್ನು ಬಂಧಿಸಲಾಗಿದೆ.

ಜಿಂಕೆ ಬೇಟೆಯಾಡಿದ್ದ ಆರೋಪಿಗಳ ಬಂಧನ

ಬಸವರಾಜು ಮತ್ತು ಮುನಿಶಿವ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಹಲಗೂರು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬೇಟೆ ನಾಯಿಗಳ ಸಹಾಯದಿಂದ ಬೇಟೆಯಾಡಿದ್ದ ಕಿರಾತಕರಿಂದ ಒಂದು ಗಂಡು ಜಿಂಕೆಯ ಕಳೆಬರ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details