ಕರ್ನಾಟಕ

karnataka

ETV Bharat / state

ಮನೆ ಬಾಗಿಲು ತೆಗೆದು ಬರುವುದರೊಳಗೆ ಕಾರಿನಲ್ಲಿದ್ದ ಹಣ ಎಗರಿಸಿದ ಖದೀಮರು

ಮಂಡ್ಯ ಜಿಲ್ಲೆಯಲ್ಲಿ ಖದೀಮರು ಕ್ಷಣದಲ್ಲೇ ಹಣ ಎಗರಿಸಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಲ್ಸರ್ ಬೈಕ್ ನಲ್ಲಿ ಕಳ್ಳರು ಪರಾರಿಯಾಗಿದ್ದಾರೆ.

By

Published : Jul 15, 2021, 5:44 PM IST

Updated : Jul 15, 2021, 6:42 PM IST

7-lakhs-robbery-in-kr-pete-at-mandya
ಕಾರಿನಲ್ಲಿದ್ದ ಹಣ ಕಳವು

ಮಂಡ್ಯ: ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯೋರ್ವನ 7 ಲಕ್ಷ ಹಣವನ್ನು ಸಿನಿಮೀಯ ರೀತಿಯಲ್ಲಿ ಎಗರಿಸಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಕೆ ಆರ್​ ಪೇಟೆಯಲ್ಲಿ ನಡೆದಿದೆ.

ಕಾರಿನ ಗಾಜು ಒಡೆದು ಹಣ ಕದ್ದಿರುವುದು

ನಾಗರಾಜು ಹಣ ಕಳೆದುಕೊಂಡಿರುವ ವ್ಯಕ್ತಿ. ಇಂದು ಪಟ್ಟಣದ ಕೆನರಾ ಬ್ಯಾಂಕ್ ನಿಂದ 7 ಲಕ್ಷ ಹಣ ಡ್ರಾ ಮಾಡಿಕೊಂಡು ತಮ್ಮ ಕಾರಿನ ಒಳಗೆ ಇಟ್ಟುಕೊಂಡು ಮನೆಗೆ ತೆರಳಿದ್ದಾರೆ. ಕಾರ್ ಪಾರ್ಕ್​ ಮಾಡಿ ಮನೆಯ ಬಾಗಿಲು ತೆರೆದು ಬರುವಷ್ಟರಲ್ಲಿ ಕಾರಿನ ಗಾಜು ಒಡೆದು ಖದೀಮರು ಹಣ ಕಳವು ಮಾಡಿದ್ದಾರೆ.

ಹಣ ಕಳೆದುಕೊಂಡ ವ್ಯಕ್ತಿ

ಹಣ ಕದ್ದ ದುಷ್ಕರ್ಮಿಗಳು ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ತಕ್ಷಣವೇ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ರೂ, ಪಟ್ಟಣದ ಹೇಮಾವತಿ ಬಡಾವಣೆಯ ಗಲ್ಲಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಹಣ ಕಳೆದುಕೊಂಡ ಶಿಕ್ಷಕ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪಟ್ಟಣದ ಹಲವು ಕಡೆಯ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.

ಓದಿ:ಪಿಎಫ್‌ ಹಣ ಎಗರಿಸ್ತಾರೆ ಎಚ್ಚರ: 71 ವರ್ಷದ ವೃದ್ಧನಿಂದ 20 ಲಕ್ಷ ಹಣ ಲಪಟಾಯಿಸಿದ ಖದೀಮ

Last Updated : Jul 15, 2021, 6:42 PM IST

ABOUT THE AUTHOR

...view details