ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಕುಷ್ಟಗಿ ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯಿತು.

By

Published : Jul 6, 2020, 5:36 PM IST

ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಕುಷ್ಟಗಿ (ಕೊಪ್ಪಳ):ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕುಷ್ಟಗಿ ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಬೆಲೆ ಏರಿಕೆಯ ಬಗ್ಗೆ ಬಿಜೆಪಿ ಸಂಸದರು, ಸಚಿವರು ತುಟಿ ಪಿಟಕ್ ಎಂದಿಲ್ಲ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ಸೈಕಲ್ ಪ್ರತಿಭಟನೆಗೆ ಕೇಸ್ ಹಾಕಿದರು. ಆರೋಗ್ಯ ಸಚಿವ ಶ್ರೀರಾಮುಲು ಅವರು ಚಿತ್ರದುರ್ಗದಲ್ಲಿ ಸಾಮಾಜಿಕ ಅಂತರ ಇಲ್ಲದೆ ಸಮಾರಂಭ ನಡೆಸಿದರೂ ಕೇಸ್​ ದಾಖಲಿಸಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೂ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿ, ಹಿಂದೆ ಮೋದಿ‌.. ಮೋದಿ.. ಎಂದು ಕೂಗು ಹಾಕುವ ಯುವಕರು ಇದೀಗ ಪೆಟ್ರೋಲ್, ಡಿಸೆಲ್ ಹೆಚ್ಚಳದಿಂದ ಕೂಗು ನಿಂತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೆಂದ್ರಪ್ಪ ಬಳೂಟಗಿ, ಚಂದಪ್ಪ ತಳವಾರ, ಮಹಿಳಾ ಜಿಲ್ಲಾ ಘಟಕದ ಅದ್ಯಕ್ಷೆ ಮಾಲತಿ ನಾಯಕ, ಯುವ ಘಟಕದ ಅದ್ಯಕ್ಷ ಲಾಡ್ಲೆ ಮಷಾಕ್ ದೋಟಿಹಾಳ, ದೊಡ್ಡಯ್ಯ ಗದ್ದಡಕಿ, ತಾ.ಪಂ.ಸದಸ್ಯ‌ಸುರೇಶ ಕುಂಟನಗೌಡರು, ಸೋಮಶೇಖರ ವೈಜಾಪುರ, ಮಂಜು ಕಟ್ಟಿಮನಿ ಮತ್ತಿತರಿದ್ದರು.

ABOUT THE AUTHOR

...view details